ಪಂಜಾಬ ಕಾಂಗ್ರೆಸ್ ಸರ್ಕಾರ ಉದ್ದೇಶಪೂರ್ವಕವಾಗಿ ಪ್ರಧಾನಿ ಅಸುರಕ್ಷಿತ ಪರಿಸ್ಥಿತಿಯಲ್ಲಿ ಉಳಿಸಿತ್ತು - ಬಿಜೆಪಿ | ಜನತಾ ನ್ಯೂಸ್
ನವದೆಹಲಿ : ಪಂಜಾಬನಲ್ಲಿ ಪೋಲೀಸರ ನಿರಂತರ ಮಾಹಿತಿ, ಪ್ರಯತ್ನದ ಬಳಿಕವೂ ಕಾಂಗ್ರೆಸ್ ಸರ್ಕಾರ ಪ್ರಧಾನಿಯವರನ್ನು ಉದ್ದೇಶಪೂರ್ವಕವಾಗಿ ಅಸುರಕ್ಷಿತ ಪರಿಸ್ಥಿತಿಯಲ್ಲಿ ಉಳಿಸಿತ್ತು", ಎಂಬ ಗಂಭೀರ ಆರೋಪವನ್ನು ಬಿಜೆಪಿ ಮಾಡಿದೆ.
ರಾಷ್ಟ್ರೀಯ ನ್ಯೂಸ್ ಚಾನೆಲ್ ನಲ್ಲಿ ಪಂಜಾಬ ಪೋಲಿಸ್ ಅಧಿಕಾರಿಯೊಬ್ಬರ ಹೇಳಿಕೆಯನು ಉಲ್ಲೇಖಿಸಿ ಮಾತನಾಡಿದ ಕೇಂದ್ರ ಮಂತ್ರಿ ಸ್ಮ್ರಿತಿ ಇರಾನಿ ಅವರು, "ಪ್ರಧಾನಮಂತ್ರಿಯವರ ಭದ್ರತೆಗೆ ಭಂಗ ಆಗುತ್ತಿರುವ ಬಗ್ಗೆ ಅವರು ನಿರಂತರವಾಗಿ ಹಿರಿಯ ಅಧಿಕಾರಿಗಳಿಗೆ ಪಂಜಾಬನ ಕಾಂಗ್ರೆಸ್ ಸರ್ಕಾರಕ್ಕೆ ಪದೇಪದೇ ಮಾಹಿತಿ ನಿಡುತ್ತಿದ್ದರೂ, ಪ್ರಧಾನಮಂತ್ರಿಯವರ ರಕ್ಷಣೆ ಮಾಡುವಂತಹ ಯಾವುದೇ ಕಾರ್ಯಾಚರಣೆಯನ್ನು ಕಾಂಗ್ರೆಸ್ ಸರ್ಕಾರ ಮಾಡಲಿಲ್ಲ.
ಈ ಸೂಚನೆ/ಎಚ್ಚರಿಕೆಯ ಬಳಿಕವೂ ಪ್ರಧಾನಮಂತ್ರಿಯವರನ್ನು ಸುರಕ್ಷಿತಗೊಳಿಸು ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳದೇ ಇದ್ದ ಪಂಜಾಬ ಕಾಂಗ್ರೆಸ್ ಸರ್ಕಾರದಲ್ಲಿರುವ ಆ ಯಾವ ನಾಯಕ, ಅಧಿಕಾರಿ ಯಾರು? ಎಂಬುದು ನನ್ನ ಪ್ರಶ್ನೆ", ಎಂದು ಮಂತ್ರಿ ಇರಾನಿ ಅವರು ಹೇಳಿದ್ದಾರೆ.
ಪ್ರಧಾನಿ ಅವರ ಸುರಕ್ಷತೆಯನ್ನು ಖಂಡಿನೆಗೆ ಪಂಜಾಬದ ಅಧಿಕಾರಿಗಳಿಗೆ ಪಂಜಾಬ ಕಾಂಗ್ರೆಸ್ ಸರ್ಕಾರದ ಯಾವ ಮುಖಂಡ ಆದೇಶ ನೀಡಿದ್ದರು? ದೌರ್ಭಾಗ್ಯ ಎಂದರೆ ಕಾಂಗ್ರೆಸ್ ಮುಖದರು ಈ ಗಂಭೀರ ಪರಿಸ್ಥಿತಿಯನ್ನು ಒಂದಲ್ಲಾ ಒಂದು ಹಾಸ್ಯಾಸ್ಪದ ರೀತಿಯಲ್ಲಿ ಸಣ್ಣದಾಗಿಸಲು ಪ್ರಯತ್ನಿಸುತ್ತಿದ್ದಾರೆ
ಪೋಲಿಸ್ ಅಧಿಕಾರಿಗಳ ಹೇಳಿಕೆ ನೀಡಿ, ಪದೇಪದೇ ಅವರ ಪ್ರಯತ್ನದ ಬಳಿಕವೂ ಕಾಂಗ್ರೆಸ್ ಪಕ್ಷದ ನೇತ್ರತ್ವವೂ ಉದ್ದೇಶ ಪೂರ್ವಕವಾಗಿ ಪ್ರಧಾನ ಮಂತ್ರಿಯವರನ್ನು ಒಂದು ಅಸುರಕ್ಷಿತ ಪರಿಸ್ಥಿತಿಯಲ್ಲಿ ಉಳಿಸಿದ್ದಾರೆ. ಇದು ಕೇವಲ ನಿಂದನೀಯ ಅಷ್ಟೇ ಅಲ್ಲ ದಂಡನೀಯ ಕೂಡ ಹೌದು, ಎಂದು ಕೇಂದ್ರ ಮಂತ್ರಿ ಸ್ಮ್ರಿತಿ ಇರಾನಿ ಹೇಳಿದ್ದಾರೆ.