ಸ್ನಾನ ಮಾಡಲು ಹೋಗಿ ಕೃಷ್ಣಾ ನದಿ ಪಾಲಾದ ಯುವಕರು | ಜನತಾ ನ್ಯೂಸ್
ರಾಯಚೂರು : ಮಕರ ಸಂಕ್ರಾಂತಿಯ ಪುಣ್ಯಸ್ನಾನ ಮಾಡುವುದಕ್ಕಾಗಿ ತೆರಳಿದ ರಾಯಚೂರಿನ ಇಬ್ಬರು ಯುವಕರು ಕೃಷ್ಣಾ ನದಿಯ ಪಾಲಾಗಿದ್ದಾರೆ.
ರಾಯಚೂರು ನಗರದ ಕೆಇಬಿ ಕಾಲನಿ ನಿವಾಸಿಗಳಾದ ಗಣೇಶ್(30) ಮತ್ತು ಉದಯ್ ಕುಮಾರ್(30) ಮೃತ ದುರ್ದೈವಿಗಳು.
ಗಣೇಶ್ ಮತ್ತು ಉದಯ್ಕುಮಾರ್ ಸೇರಿ ಒಟ್ಟು 7 ಮಂದಿ ಸ್ನೇಹಿತರು ಹಬ್ಬದ ಹಿನ್ನೆಲೆ ಪುಣ್ಯಸ್ನಾನಕ್ಕೆಂದು ಕೃಷ್ಣಾ ನದಿಗೆ ತೆರಳಿದ್ದರು. ಈ ವೇಳೆ ಗಣೇಶ್ ಮತ್ತು ಉದಯ್ ಮೃತಪಟ್ಟಿದ್ದಾರೆ.
ಮೃತ ಗಣೇಶ್ ಜೆಸ್ಕಾಂ ಜೆಇ ಅವರ ಸಹೋದರ. ಉದಯ್ ಜೆಸ್ಕಾಂ ಲೈನ್ಮನ್ ಆಗಿದ್ದ. ಗಣೇಶ್ನ ಮೃತದೇಹ ಪತ್ತೆಯಾಗಿದ್ದು, ಉದಯ್ಕುಮಾರ್ ಮೃತದೇಹಕ್ಕಾಗಿ ಶೋಧ ನಡೆಸಲಾಗುತ್ತದೆ.
RELATED TOPICS:
English summary :Rayachuru: 2 people dead in krashna river