ಸಮನ್ವಿ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಡಿ.ಕೆ ಶಿವಕುಮಾರ್ | ಜನತಾ ನ್ಯೂಸ್
ಬೆಂಗಳೂರು : ರಸ್ತೆ ಅಪಘಾತದಲ್ಲಿ ನಿಧರಾದ ಸಮನ್ವಿ ಮನೆಗೆ ಮಂಗಳವಾರ ಭೇಟಿ ನೀಡಿದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷ ಡಿಕೆ ಶಿವಕುಮಾರ ಅವರು ಆಕೆಯ ಪೋಷಕರಿಗೆ ಧೈರ್ಯ ಹೇಳಿದರು.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ.ಶಿವಕುಮಾರ್, ನಾಯ್ಡು ಅವರ ಕುಟುಂಬ ತಮಗೆ ಮೊದಲಿನಿಂದಲೂ ಪರಿಚಯ ಎಂದು ಹೇಳಿದ ಶಿವಕುಮಾರ ಅವರು ವಿಧಿ ಈ ಕುಟುಂಬದಲ್ಲಿ ಬಹಳ ಕ್ರೂರವಾಗಿ ಆಡಿದೆ ಎಂದರು. ಕರ್ನಾಟಕದಲ್ಲಿ ಮನೆಮಾತಾಗಿದ್ದ ಸಮನ್ವಿಯ ಸಾವು ಬಹಳ ಅನ್ಯಾಯ, ಚಿಕ್ಕವಯಸ್ಸಿನಲ್ಲೇ ಬಹಳ ಅಭಿಮಾನಿಗಳನ್ನ ಗಳಿಸಿದ್ದರು. ಇಂಥಹ ಘಟನೆ ನಡೆಯಬಾರದಿತ್ತು ಎಂದರು.
ಆ ಮಗುವಿನ ತಂದೆ ಮಾತನ್ನ ಕೇಳಿದ್ರೆ ನಿಜಕ್ಕೂ ಬೇಸರ ಆಗುತ್ತದೆ. ತಾಯಿಗೆ ನೋವಾಗಿದೆ, ನಾನು ಧೈರ್ಯ ತುಂಬಿದ್ದೇನೆ. ಅಮೃತಾ ನಾಯ್ಡು ಅವರು ಸಹ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗಳು ವಾಸಿಯಾಗಬೇಕು ಮತ್ತು ಮಾನಸಿಕವಾಗಿ ತೀವ್ರ ಆಘಾತಕ್ಕೊಳಗಾಗಿರುವುದರಿಂದ ಚೇತರಿಸಿಕೊಳ್ಳಲು ಸಮಯ ಬೇಕಾಗುತ್ತದೆ ಎಂದರು.