ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದ ಮಂಡ್ಯ ವಿದ್ಯಾರ್ಥಿನಿಗೆ ಐಫೋನ್, ಸ್ಮಾರ್ಟ್ವಾಚ್ ನೀಡಿದ ಕಾಂಗ್ರೆಸ್ ಶಾಸಕ | ಜನತಾ ನ್ಯೂಸ್
ಮಂಡ್ಯ : ಹಿಜಾಬ್ ವಿವಾದ ಹಿನ್ನೆಲೆ ಪಿಇಎಸ್ ಕಾಲೇಜಿನಲ್ಲಿ ಜೈಶ್ರೀರಾಮ್ ಘೋಷಣೆಗೆ ಪ್ರತಿಯಾಗಿ "ಅಲ್ಲಾಹು ಅಕ್ಬರ್" ಎಂದು ಕೂಗಿದ್ದ ಹಿಜಾಬ್ಧಾರಿ ವಿದ್ಯಾರ್ಥಿನಿ ಮುಸ್ಕಾನ್ ಮನೆಗೆ ಮಹಾರಾಷ್ಟ್ರದ ಬಾಂದ್ರಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಜೀಶನ್ ಸಿದ್ದಿಕ್ ಭೇಟಿ ನೀಡಿ ಐಫೋನ್ ಮತ್ತು ಸ್ಮಾರ್ಟ್ವಾಚ್ ಗಿಫ್ಟ್ ಕೊಟ್ಟಿದ್ದಾರೆ.
ಮಂಡ್ಯದ ಗುತ್ತಲು ಬಡಾವಣೆಯಲ್ಲಿರುವ ವಿದ್ಯಾರ್ಥಿನಿಯ ನಿವಾಸಕ್ಕೆ ಭೇಟಿ ನೀಡಿದ ಶಾಸಕ, ಮುಸ್ಕಾನ್ ಘೋಷಣೆ ಕೂಗಿರುವುದು ನನಗೆ ಹೆಮ್ಮೆ ಅನ್ನಿಸಿದೆ. ಅಷ್ಟು ಜನರ ಎದುರು ಮುಸ್ಕಾನ್ ಧೈರ್ಯದಿಂದ ನಡೆದಿದ್ದಾರೆ.
ಅದರ ಬಗ್ಗೆ ಇಂದು ಇಡೀ ದೇಶವೇ ಮಾತನಾಡುತ್ತಿದೆ. ಹಿಜಾಬ್ ಹಾಕಿಕೊಳ್ಳುವುದು ಅವರ ಹಕ್ಕು. ಅವರ ಹಕ್ಕಿನ ಬಗ್ಗೆ ಧೈರ್ಯದಿಂದ ಮುಸ್ಕಾನ್ ಧ್ವನಿ ಎತ್ತಿದ್ದಾರೆ ಎಂದು ಶಾಸಕ ಸಿದ್ಧಿಕಿ ಹೇಳಿದ್ದಾರೆ.