ಕಾಂಗ್ರೆಸ್ನವರಿಗೆ ಹಿಂದೂಗಳು ಯಾರೇ ಸತ್ತರೂ ಚಿಂತೆ ಇಲ್ಲ, ಅವರ ಬ್ರದರ್ಸ ಸೇಫ್ ಆಗಿಬಿಟ್ಟರೆ ಸಾಕು - ಸಂಸದ ಸಿಂಹ | ಜನತಾ ನ್ಯೂಸ್
ಮೈಸೂರು : ನಮ್ಮ ಕಾಂಗ್ರೆಸ್ ನಾಯಕರನ್ನು ಕೇಳಲು ಬಯಸುತ್ತೇನೆ, ಹರ್ಷ ಧರ್ಮಾಂಧತೆಗೆ ಬಲಿಯಾಗಿ ಒಂದು ವಾರ ಆಗಲಿಕ್ಕೆ ಬಂತು ಒಬ್ಬ ಕಾಂಗ್ರೆಸ್ ಲೀಡರ್ ಅಲ್ಲಿಗೆ(ಹರ್ಷ ಮನೆಗೆ) ಬರುತ್ತಿಲ್ಲ ಯಾಕೆ? ಎಂದು ಸಂಸದ ಪ್ರತಾಪ್ ಸಿಂಹ ಕಾಂಗ್ರೆಸ್ ಮುಖಂಡರನ್ನು ಖಾರವಾಗಿ ಪ್ರಶ್ನಿಸಿದ್ದಾರೆ.
ಒಂದು ದನಗಳಿಗೆ ಕಾಂಪೆನ್ಸೇಷನ್ ಕೊಟ್ಟವರು ಕಾಂಗ್ರೆಸ್ ಎಂಬುದು ನನಗೆ ಗೊತ್ತು ದನಗಳು ಸತ್ತಾಗ ದನಗಳಿಗೆ ಕೊಡುತ್ತಾರೆ. ಆದರೆ ಈ ಹರ್ಷ ಧರ್ಮಾಂಧತೆಗೆ ಬಲಿಯಾದ ನಂತರವೂ ಕೂಡ ಒಬ್ಬನೇ ಒಬ್ಬ ಕಾಂಗ್ರೆಸ್ ಲೀಡರ್ ಇಲ್ಲಿಗೆ ಬಂದು ಒಂದು ಸಂತನದ ಮಾತನಾಡಲಿಲ್ಲ, ಅಂದರೆ ಅವರ ಉದ್ದೇಶ ಏನು? ಸಿದ್ದರಾಮಯ್ಯನವರಿಗೆ ಹೋಗಿ ಸಿನಿಮಾ ನೋಡುವುದಕ್ಕೆ ಆಗುತ್ತೆ ಯಾವುದೋ ಪ್ರೀಮಿಯರ್ ಶೋ ಗೆ ಹೋಗುತ್ತಾರೆ. ಶಿವಮೊಗ್ಗಕ್ಕೆ ಬರೋಕೆ ಆಗೋದಿಲ್ವಾ? ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ನವರಿಗೆ ಹೇಳಲು ಬಯಸುತ್ತೇನೆ, ನಿಮಗೆ ರಾಜಕೀಯ ಮಾಡೋದಕ್ಕೆ ಅಷ್ಟೊಂದು ಸಮಯ ಇರುತ್ತದೆ. ಹರ್ಷ ನಮ್ಮ ಕನ್ನಡಿಗನಲ್ಲವಾ? ಈ ಸಾವಿನಲ್ಲಿ ರಾಜಕಾರಣ ಮಾಡುತ್ತೀರಾ? ನೀವು ಇದೇ ಬೇರೆ ಕೋಮಿಗೆ ಸೇರಿದವರು ನಿಮ್ಮ ಬ್ರದರ್ಸ್ ಯಾರು ಸತ್ತುಹೋಗಿದ್ದಾರೆ ಸುಮ್ನೆ ಇದ್ರಾ? ನೀವು ಚೆಕ್ ತೆಗೆದುಕೊಂಡು ಅವರ ಮನೆ ಬಾಗಿಲಿಗೆ ಬರುತ್ತಿದ್ರಿ ಅಥವಾ ಸರ್ಕಾರದಿಂದ ಕೊಡಿಸುತ್ತಿದ್ದರು. ಈಗೇಕೆ ಬರುತ್ತಿಲ್ಲ? ಕಾಂಗ್ರೆಸ್ನವರಿಗೆ ಹಿಂದೂ ಕಾರ್ಯಕರ್ತರು ಯಾರೇ ಸತ್ತುಹೋದರು ಚಿಂತೆ ಇಲ್ಲ. ಅವರಿಗೆ ಅವರ ಬ್ರದರ್ ಸೇಫ್ ಆಗಿಬಿಟ್ಟರೆ ಸಾಕು.
ಅವರ ಮನಸ್ಥಿತಿ ಹೇಗಿದೆ ಅಂದರೆ, ಸಿದ್ದರಾಮಯ್ಯನವರಿಗೆ ಗೋರಿಪಾಳ್ಯದ ಜಮೀರ್ ಅಹಮದ್ ವೈಸ್ ಕ್ಯಾಪ್ಟನ್ ಡಿಕೆ ಶಿವಕುಮಾರ್ ಅವರಿಗೆ ಮೊಹಮ್ಮದ್ ನಲಪಾಡ್ ವಾಯ್ಸ್ ಕ್ಯಾಪ್ಟನ್. ಆ ಕೋಮಿನವರಿಗೆ(ಮುಸ್ಲಿಂ) ಏನಾದರೂ ಆದರೆ ಮಾತ್ರ ಓಡಿ ಬರುತ್ತಾರೆ ಹೊರತು ಬೇರೆ ಹಿಂದೂ ಸಮಾಜದವರಿಗೆ ಏನೇ ಆದರೂ ತಿರುಗು ಕೂಡ ನೋಡೋದಿಲ್ಲ. ಈ ಮಾಧ್ಯಮ ಮೂಲಕ ಹೇಳಲು ಬಯಸುತ್ತೇನೆ ಏನೆಂದರೆ, ಕಾಂಗ್ರೆಸ್ ಸರ್ಕಾರ ಬಂದರೆ, ಅದು ಸಿದ್ದರಾಮಯ್ಯ ಇರಲಿ ಡಿಕೆ.ಶಿವಕುಮಾರ್ ಇರಲಿ, ತಾಲಿಬಾನ್ ಸರ್ಕಾರ ಬರುತ್ತೆ ಹೊರತಾಗಿ ನಮ್ಮ ರಾಜ್ಯದಲ್ಲಿ ಪ್ರಭಾ ಪ್ರಜಾಪ್ರಭುತ್ವಕ್ಕೆ ಅನುಗುಣವಾದ ಸರ್ಕಾರ ಯಾವತ್ತು ಬರುವುದಿಲ್ಲ. ಎಚ್ಚರಿಕೆಯಿಂದ ಇರಿ, ಎಂದು ಎಚ್ಚರಿಕೆ ನೀಡಿದ್ದಾರೆ.
ಇಂದೇ ರಾಜು ಮೈಸೂರಿನಲ್ಲಿ ಹತ್ಯೆಯಾದಾಗ ಕೂಡ ಸಿದ್ದರಾಮಯ್ಯನವರು ವಾರಕ್ಕೊಮ್ಮೆ ಬೀಗರೂಟ ಬಾಡೂಟ ಮದುವೆ ಅಂತ ಬರುವರು ಆದರೆ ಒಮ್ಮೆ ಕೂಡ ರಾಜು ಅವರ ಮನೆ ಹತ್ತಿರ ಕೂಡ ಬಂದಿಲ್ಲ ಹಾಗಾಗಿ ಇಂತಹ ಕಾಂಗ್ರೆಸ್ ನಾಯಕರ ಬಗ್ಗೆ ಕೂಡ ಹಿಂದೂ ಬಾಂಧವರು ಎಚ್ಚರಿಕೆಯಿಂದ ಇರಬೇಕಾಗಿ ಕೇಳಿಕೊಳ್ಳುತ್ತೇನೆ, ಎಂದು ಸಿಂಹ ಹೇಳಿದ್ದಾರೆ.