ಆಪರೇಷನ್ ಗಂಗಾ : ಉಕ್ರೇನ್ ನಿಂದ ದೆಹಲಿ ತಲುಪಿದ ಭಾರತೀಯ ಪ್ರಜೆಗಳನ್ನೂ ಸ್ವಾಗತಿಸಿದ ಕೇಂದ್ರ ಸಚಿವ ಆರ್ಕೆ.ಸಿಂಗ್ | ಜನತಾ ನ್ಯೂಸ್
ನವದೆಹಲಿ : ಉಕ್ರೇನ್ ನಲ್ಲಿ ರಕ್ಷಿಸಿ ತರುವ ಭಾರತ ಸರ್ಕಾರದ ವಿಶೇಷ ಕಾರ್ಯಾಚರಣೆಯಾದ ಆಪರೇಷನ್ ಗಂಗಾ ಅಡಿಯಲ್ಲಿ ಭಾರತೀಯ ಪ್ರಜೆಗಳನ್ನು ಹೊತ್ತೊಯ್ಯುವ ವಿಶೇಷ ವಿಮಾನವು ರೊಮೇನಿಯಾದ ರಾಜಧಾನಿ ಬುಕಾರೆಸ್ಟ್ನಿಂದ ದೆಹಲಿಗೆ ಹೊರಟಿದೆ.
ರಷ್ಯಾದ ಸೇನಾ ಕಾರ್ಯಾಚರಣೆಯಿಂದಾಗಿ ಸಂಕಷ್ಟ ಎದುರಿಸುತ್ತಿರುವ ಉಕ್ರೇನ್ನಿಂದ ಸ್ಥಳಾಂತರಿಸಿದ ನಂತರ ಇಂದು ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಭಾರತೀಯ ವಿದ್ಯಾರ್ಥಿಗಳನ್ನು ಕೇಂದ್ರ ವಿದ್ಯುತ್ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಆರ್ಕೆ.ಸಿಂಗ್ ಮಂಗಳವಾರ ಸ್ವಾಗತಿಸಿದರು.
ಎಂಟನೇ ಆಪರೇಷನ್ ಗಂಗಾ ವಿಮಾನವು 216 ಭಾರತೀಯ ಪ್ರಜೆಗಳೊಂದಿಗೆ ಬುಡಾಪೆಸ್ಟ್ನಿಂದ ನವದೆಹಲಿ ತಲುಪಿದೆ.
ರಾಷ್ಟ್ರ ರಾಜಧಾನಿಯಲ್ಲಿ ಭೂಸ್ಪರ್ಶ ಮಾಡಿದ ಕೂಡಲೇ ವಿದ್ಯಾರ್ಥಿಗಳು "ವಂದೇ ಮಾತರಂ" ಅನ್ನು ಪಠಿಸುತ್ತಿದ್ದಂತೆ ಸಂತೋಷದಿಂದ ರಾಷ್ಟ್ರಧ್ವಜವನ್ನು ಬೀಸುತ್ತಿರುವುದು ಕಂಡುಬಂದಿತು.