ರಷ್ಯಾದ ಪ್ರದೇಶದ ಮೂಲಕ ಉಕ್ರೇನ್ನಲ್ಲಿ ಸಿಲುಕಿರುವ ಭಾರತಿಯರನ್ನು ತುರ್ತು ಸ್ಥಳಾಂತರಿಸಲಿದೆ ರಷ್ಯಾ | ಜನತಾ ನ್ಯೂಸ್
ನವದೆಹಲಿ : ಖಾರ್ಕಿವ್ ಮತ್ತು ಪೂರ್ವ ಉಕ್ರೇನ್ನ ಇತರ ಪ್ರದೇಶಗಳಲ್ಲಿ ಸಿಲುಕಿರುವ ಭಾರತೀಯರಿಗಾಗಿ ನಾವು ಭಾರತೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ರಷ್ಯಾದ ಪ್ರದೇಶದ ಮೂಲಕ ಅಲ್ಲಿ ಸಿಲುಕಿರುವ ಎಲ್ಲರನ್ನೂ ತುರ್ತು ಸ್ಥಳಾಂತರಿಸಲು ನಾವು ಭಾರತದ ವಿನಂತಿಗಳನ್ನು ಸ್ವೀಕರಿಸಿದ್ದೇವೆ, ಎಂದು ಡೆನಿಸ್ ಅಲಿಪೋವ್, ಭಾರತಕ್ಕೆ ರಷ್ಯಾದ ರಾಯಭಾರಿ-ನಿಯೋಜಿತ ಹೇಳಿದ್ದಾರೆ.
ಉಕ್ರೇನ್ನ ಖಾರ್ಕಿವ್ನಲ್ಲಿ ನಡೆದ ಭಾರತೀಯ ಪ್ರಜೆ ನವೀನ್ ಹತ್ಯೆಯ ಬಗ್ಗೆ ರಷ್ಯಾ ತನಿಖೆ ನಡೆಸಲಿದೆ, ಎಂದು ಭಾರತದಲ್ಲಿರುವ ರಷ್ಯಾದ ರಾಯಭಾರಿ ಘೋಷಿಸಿದ್ದಾರೆ. ಖಾರ್ಕಿವ್ನಲ್ಲಿ ವೈದ್ಯಕೀಯ ವಿದ್ಯಾರ್ಥಿಯಾಗಿದ್ದ ಕರ್ನಾಟಕದ ನವೀನ್ ನಿನ್ನೆ ಆಹಾರ ಸಂಗ್ರಹಿಸಲು ತೆರಳಿದಾಗ ಕೊಲೆಯಾಗಿದ್ದರು.
ನಾವು ಭಾರತದೊಂದಿಗೆ ಕಾರ್ಯತಂತ್ರದ ಮಿತ್ರರು. ವಿಶ್ವಸಂಸ್ಥೆಯಲ್ಲಿ ಭಾರತವು ಸಮತೋಲಿತ ಸ್ಥಾನವನ್ನು ಪ್ರದರ್ಶಿಸಿದ್ದಕ್ಕಾಗಿ ನಾವು ಅದಕ್ಕೆ ಕೃತಜ್ಞರಾಗಿರುತ್ತೇವೆ. ಈ ಬಿಕ್ಕಟ್ಟಿನ ಆಳವನ್ನು ಭಾರತ ಅರ್ಥಮಾಡಿಕೊಂಡಿದೆ, ಎಂದು ಡೆನಿಸ್ ಅಲಿಪೋವ್ ಹೇಳಿದ್ದಾರೆ.
ನಿರ್ಬಂಧಗಳ ಪ್ರಭಾವದಿಂದಾಗಿ ಪ್ರಸ್ತುತ ಸನ್ನಿವೇಶದಲ್ಲಿ ಭಾರತಕ್ಕೆ ಎಸ್-400 ವಾಯು ರಕ್ಷಣಾ ವ್ಯವಸ್ಥೆಗಳ ಪೂರೈಕೆಯ ಕುರಿತು ಮಾತನಾಡುತ್ತಾ ಡೆನಿಸ್ ಅಲಿಪೋವ್, ಭಾರತಕ್ಕೆ ಎಸ್-400 ಪೂರೈಕೆಗೆ ಸಂಬಂಧಿಸಿದಂತೆ ಯಾವುದೇ ಅಡೆತಡೆಗಳನ್ನು ನಿರೀಕ್ಷಿಸಬೇಡಿ; ಈ ಒಪ್ಪಂದವನ್ನು ಅಡೆತಡೆಯಿಲ್ಲದೆ ಮುಂದುವರಿಸಲು ಮಾರ್ಗಗಳಿವೆ. ನಿರ್ಬಂಧಗಳು - ಹಳೆಯದು ಅಥವಾ ಹೊಸದು, ಯಾವುದೇ ರೀತಿಯಲ್ಲಿ ಹಸ್ತಕ್ಷೇಪ ಮಾಡಲಾರದು, ಎಂದು ಹೇಳಿದ್ದಾರೆ.
ಭಾರತ ಸರ್ಕಾರ ಕೈಗೊಂಡಿರುವ ಆಪರೇಷನ್ ಗಂಗಾ ಅಡಿಯಲ್ಲಿ ಉಕ್ರೇನ್ನಿಂದ ಸ್ಥಳಾಂತರಿಸಲ್ಪಟ್ಟ ವಿದ್ಯಾರ್ಥಿಗಳೊಂದಿಗೆ 9 ವಿಮಾನಗಳು ಮಾರ್ಚ್ 4 ರಂದು ಭಾರತವನ್ನು ತಲುಪಲಿವೆ.