ಉಕ್ರೇನ್ ನಲ್ಲಿ ಸಿಲುಕಿದ್ದ ಸುಮಾರು 208 ಭಾರತೀಯರನ್ನು ಹೊತ್ತ ವಿಶೇಷ ವಿಮಾನ! | ಜನತಾ ನ್ಯೂಸ್
ನವದೆಹಲಿ : 208 ಭಾರತೀಯರೊಂದಿಗೆ ಭಾರತೀಯ ವಾಯುಪಡೆಯ (ಐಎಎಫ್) 3ನೇ ವಿಮಾನವು ಹಿಂಡನ್ ವಾಯುನೆಲೆಗೆ ಬಂದಿಳಿದಿದೆ.
ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಭಾರತೀಯ ನಾಗರಿಕರನ್ನು ಕೇಂದ್ರ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಬರಮಾಡಿಕೊಂಡರು.
ನಂತರ ಮಾತನಾಡಿ "ನಾವು ಕಷ್ಟಗಳ ನಡುವೆಯೂ ನಮ್ಮ ನಾಗರಿಕರನ್ನು ಮರಳಿ ಕರೆತರುತ್ತಿದ್ದೇವೆ. ಸಂಕಷ್ಟದಲ್ಲಿರುವ ಪ್ರತಿಯೊಬ್ಬ ಭಾರತೀಯರನ್ನು ತಲುಪುವುದು ಮೋದಿ ಸರ್ಕಾರದ ಮೂಲ ಸಿದ್ಧಾಂತವಾಗಿದೆ" ಎಂದು ಚಂದ್ರಶೇಖರ್ ತಿಳಿಸಿದರು.
ಆಪರೇಷನ್ ಗಂಗಾ ಮಿಷನ್ನ ಭಾಗವಾಗಿ ವಿಶೇಷ ವಿಮಾನಗಳ ಮೂಲಕ ಉಕ್ರೇನ್ನಲ್ಲಿ ಇನ್ನುಳಿದ ಭಾರತೀಯರನ್ನು ಉಚಿತವಾಗಿ, ಸರ್ಕಾರದ ವೆಚ್ಚದಲ್ಲಿ ವಾಪಾಸ್ ಕರೆತರಲಾಗುತ್ತದೆ.
Delighted to welcome 180 students from #Bucharest brought by @IAF_MCC C17 aircraft today at Hindon airport, Delhi under #OperationGanga@PMOIndia @narendramodi @DrSJaishankar @SpokespersonMoD @rajnathsingh pic.twitter.com/RcNWaeMmbs
— Ajay Bhatt (@AjaybhattBJP4UK) March 3, 2022