ದಾವೂದ್ ಇಬ್ರಾಹಿಂ ಗೆ ಸಮರ್ಪಿತ, ದಾವೂದ್ ಶರಣದಲ್ಲಿದೆ ಮಹಾರಾಷ್ಟ್ರ ಸರ್ಕಾರ - ವಿರೋಧ ಪಕ್ಷದ ನಾಯಕ ಫಡ್ನವಿಸ್ | ಜನತಾ ನ್ಯೂಸ್
ಮುಂಬೈ : ಮಹಾರಾಷ್ಟ್ರ ಸರ್ಕಾರವು ದಾವೂದ್ ಇಬ್ರಾಹಿಂ ಗೆ ಸಮರ್ಪಿತ, ದಾವೂದ್ ಗೆ ಶರಣಾಗಿದೆ, ಎಂದು ಮಹಾರಾಷ್ಟ್ರ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರದಲ್ಲಿರುವ ಕಾಂಗ್ರೆಸ್, ಎನ್ಸಿಪಿ ಹಾಗೂ ಶಿವಸೇನೆ ಮೈತ್ರಿಯ ಮಹಾ ಆಘಾಡಿ ಸರ್ಕಾರದ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.
ಮಹಾರಾಷ್ಟ್ರದಲ್ಲಿ ಮೊದಲ ಬಾರಿಗೆ ಸಚಿವ(ನವಾಬ್ ಮಲಿಕ್)ರೊಬ್ಬರು ಕಂಬಿ ಹಿಂದೆ ಬಿದ್ದಿದ್ದರೂ, ಅವರ ರಾಜೀನಾಮೆಯನ್ನು ತೆಗೆದುಕೊಳ್ಳಲಾಗಿಲ್ಲ. ಇದು ನಂಬಲು ಅಸಾದ್ಯ. ಅವರು ಸಣ್ಣ ವಿಷಯಕ್ಕೆ ಜೈಲು ಪಾಲಾಗಿಲ್ಲ, ದಾವೂದ್ ಇಬ್ರಾಹಿಂ ಕುಟುಂಬದೊಂದಿಗೆ ವ್ಯವಹರಿಸಿದ ಆರೋಪ ಅವರ ಮೇಲಿದೆ, ಎಂದು ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವಿಸ್ ಅಸಮಧಾನವನ್ನು ಹೊರಹಾಕಿದ್ದಾರೆ.
ಅವರ ರಾಜೀನಾಮೆಯನ್ನು ತೆಗೆದುಕೊಳ್ಳಲು ಸರ್ಕಾರ ಏಕೆ ಬಯಸುವುದಿಲ್ಲ? ಇದು "ದಾವೂದ್ ಸಮರ್ಪಿತ", "ದಾವೂದ್ ಶರಣ್" ಸರ್ಕಾರ. ದಾವೂದ್ ಜೊತೆ ಸಂಬಂಧ ಇಟ್ಟುಕೊಂಡಿರುವ ಜನರನ್ನು ಉಳಿಸಲು ಈ ಸರ್ಕಾರ ಒಗ್ಗೂಡುತ್ತಿದೆ. ಅದಕ್ಕಾಗಿಯೇ ನಾವು ಪ್ರತಿಭಟನೆಗಳನ್ನು ಪ್ರಾರಂಭಿಸಿದ್ದೇವೆ ಮತ್ತು ಅವರ ರಾಜೀನಾಮೆಯನ್ನು ತಕ್ಷಣವೇ ತೆಗೆದುಕೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ, ಎಂದು ದೇವೇಂದ್ರ ಫಡ್ನವಿಸ್ ಆರೋಪಿಸಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ವಿಧಾನಸಭೆ ಅಧಿವೇಶನಕ್ಕೆ ಪಕ್ಷದ ಕಾರ್ಯತಂತ್ರದ ಕುರಿತು ಚರ್ಚಿಸಲು ಎಲ್ಲಾ ಬಿಜೆಪಿ ಶಾಸಕರು ಇಂದು ಸಭೆ ಸೇರಲಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜರ ಕುರಿತಾದ ವಿವಾದಾತ್ಮಕ ಹೇಳಿಕೆಗಳ ನೀಡಿದ್ದಾರೆಂದು ರಾಜ್ಯಪಾಲರ ವಿರುದ್ಧ ಪ್ರತಿಭಟಿಸಿ ಘಟನೆಗಳು ಇಂದು ವಿಧಾನಸಭೆ ಆವರಣದಲ್ಲಿ ನಡೆದಿರುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ, ಎಂದು ಬಳಿಕ ಫಡ್ನವಿಸ್ ಅವರು ಎಏನ್ಐ ತಿಳಿಸಿದ್ದಾರೆ.