ಅತ್ಯಾಚಾರ ನಡೆಸಿದ ಆರೋಪಿಗೆ ಪರೀಕ್ಷೆ ಬರೆಯಲು ಅನುಮತಿ ಕೊಟ್ಟ ಹೈಕೋರ್ಟ್! | ಜನತಾ ನ್ಯೂಸ್
ಬೆಂಗಳೂರು : ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗೆ 'ಬಿ.ಕಾಂ' ಪರೀಕ್ಷೆ ಬರೆಯಲು ಹೈಕೋರ್ಟ್ ಅನುಮತಿ ನೀಡಿದೆ.
ಕೇಸ್ ಇನ್ನೂ ತನಿಖಾ ಹಂತದಲ್ಲಿದೆ. ಕೇಸ್ ಬಾಕಿ ಇರುವ ಕಾರಣಕ್ಕೆ ಆರೋಪಿ ವಿದ್ಯಾರ್ಥಿಯ ಭವಿಷ್ಯವನ್ನು ಡೋಲಾಯಮಾನವಾಗಿಡಲು ಸಾಧ್ಯವಿಲ್ಲ. ಹೀಗಾಗಿ ಆತನಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡುಲು ಅನುಮತಿ ನೀಡಿದೆ.
ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದ ಆರೋಪಿ ದರ್ಶನ್ಗೆ ಪ್ರತ್ಯೇಕ ಕೊಠಡಿಯಲ್ಲಿ ಬಿಕಾಂ ಪರೀಕ್ಷೆ ಬರೆಯಲು ಹೈಕೋರ್ಟ್ ಅನುಮತಿ ನೀಡಿದೆ. ಕೊಠಡಿಗೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು. ಪರೀಕ್ಷೆ ಬರೆಯಲು ಜೈಲಿನಿಂದಲೇ ಕರೆತರಬೇಕು. ಪರೀಕ್ಷೆ ಬರೆದ ನಂತರ ಜೈಲಿಗೆ ಕರೆದೊಯ್ಯಬೇಕು. ಈ ವೇಳೆ ಆರೋಪಿಗೆ ಕೈಗೆ ಬೇಡಿ ಹಾಕಬಾರದು. ಭದ್ರತಾ ಸಿಬ್ಬಂದಿ ಪೊಲೀಸ್ ಸಮವಸ್ತ್ರ ಹಾಕಬಾರದು. ಭದ್ರತೆಯ ವೆಚ್ಚ ಆರೋಪಿಯೇ ಭರಿಸಬೇಕೆಂದು ಷರತ್ತುಗಳನ್ನು ಹಾಕಿ ನ್ಯಾ. ವಿ.ಶ್ರೀಷಾನಂದರವರಿದ್ದ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ.