ಕಾಂಗ್ರೆಸ್ನ್ನು ವಿಪಕ್ಷ ಸ್ಥಾನದಿಂದ ಅಪಕ್ಷ ಸ್ಥಾನಕ್ಕೆ ಕಳುಹಿಸುತ್ತಾರೆ: ಸಿ.ಟಿ ರವಿ | ಜನತಾ ನ್ಯೂಸ್
ಬೆಂಗಳೂರು : ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಗಮನಹರಿಸಿದ್ದೀರಿ ಬಿಜೆಪಿಗೆ ಅಭೂತಪೂರ್ವ ಜಯ ಸಿಕ್ಕಿದೆ. ಜನ ಕಾಂಗ್ರೆಸ್ನ್ನು ವಿಪಕ್ಷ ನಾಯಕ ಸ್ಥಾನದಿಂದ ಅಪಕ್ಷ ಸ್ಥಾನಕ್ಕೆ ಕಳುಹಿಸುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಗೋವಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಂಚರಾಜ್ಯಗಳ ಫಲಿತಾಂಶದಲ್ಲಿ ಬಿಜೆಪಿಯ ಸಾಧನೆ ಸಮಾಧಾನ ತಂದಿದೆ. ಗೋವಾದಲ್ಲಿ ಸ್ಥಿರ ಸರ್ಕಾರ ಕೊಟ್ಟಿದ್ದೆವು, ಒಳ್ಳೆಯ ಅಭಿವೃದ್ಧಿ ಕಾರ್ಯಗಳೂ ಆಗಿದ್ದವು. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವ, ಭಾರತೀಯ ಜನರು ಪಾರ್ಟಿ, ಪ್ರಮೋದ್ ಸಾವಂತ್ ಎಲ್ಲಾ ಒಟ್ಟುಗೂಡಿ ಸಂಘಟಿತ ಪ್ರಯತ್ನ ಮಾಡಿದ್ದೆವು. ಆ ಪ್ರಯತ್ನಕ್ಕೆ ಜನ ಆಶೀರ್ವದಿಸಿದ್ದಾರೆ.
ದೇವೇಂದ್ರ ಫಡ್ನವಿಸ್ ಮತ್ತು ನಮ್ಮ ತಂಡ ಸಮನ್ವಯದಿಂದ ತಳಮಟ್ಟದಿಂದ ಕೆಲಸ ಮಾಡಿದ್ದೆವು. ಅದರ ಪರಿಣಾಮ ಒಳ್ಳೆಯ ಫಲಿತಾಂಶ ನಿರೀಕ್ಷೆಯಂತೆ ಜನರು ಕೊಟ್ಟಿದ್ದಾರೆ. ಗೋವಾ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ.ಇದಕ್ಕಾಗಿ ಶ್ರಮಿಸಿದ ಕಾರ್ಯಕರ್ತರಿಗೂ ಧನ್ಯವಾದ ಹೇಳುತ್ತೇನೆ ಎಂದರು.
ಮುಂದಿನ ವರ್ಷ ಕರ್ನಾಟಕದ ಜನತೆಯೂ ಕಾಂಗ್ರೆಸ್ಗೆ ಪಾಠ ಕಲಿಸುತ್ತದೆ. ಸದ್ಯ ಗೋವಾ ಜನತೆ ಖಾಲಿ ಕೈನಲ್ಲಿ ಕಳುಹಿಸಿದೆ ಮುಂದೆ ಕರ್ನಾಟಕದ ಜನತೆ ಖಾಲಿ ಕೈನಲ್ಲಿ ಕಳುಹಿಸುತ್ತಾರೆ. ಪರಿಶ್ರಮದಿಂದ ಕೆಲಸ ಮಾಡಿದರೆ ಗೆಲುವು ಸಿಗುತ್ತದೆ ಎಂಬುದಕ್ಕೆ ಇದೇ ಉದಾಹರಣೆ. 4 ರಾಜ್ಯದಲ್ಲಿ ಅಧಿಕಾರ ಪಡೆಯುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.