ವಿದ್ಯಾರ್ಥಿ ಕಿಡ್ನಾಪ್, ಸೈಕಲ್ ವಿಚಾರಕ್ಕೆ ಕಿಡ್ನಾಪ್ ಶಂಕೆ.. | ಜನತಾ ನ್ಯೂಸ್
ಕಲಬುರಗಿ : ಸೈಕಲ್ ವಿಚಾರದಲ್ಲಿ ಗಲಾಟೆ ನಡೆದು ಪಿಯುಸಿ ವಿದ್ಯಾರ್ಥಿಯನ್ನು ಅಪಹರಣ ಮಾಡಿಲಾಗಿದೆ ಎಂಬ ಆರೋಪ ವಿವಿ ಠಾಣಾ ವ್ಯಾಪ್ತಿಯಲ್ಲಿ ಕೇಳಿಬಂದಿದೆ.
ಪಿಯುಸಿ ವಿಜ್ಞಾನ ವಿದ್ಯಾರ್ಥಿ ಸಂತೋಷ್ ಚಹ್ವಾಣ್ನನ್ನು (17) ಟ್ಯೂಶನ್ ಹೋಗುವಾಗ ಅಪಹರಿಸಲಾಗಿದೆ.
ಕಲಬುರಗಿಯ ಶಹಬಾದ ರಸ್ತೆ ಮಾತಾ ಮಾಣಿಕೇಶ್ವರಿ ಕಾಲೋನಿ ನಿವಾಸಿಯಾದ ಸಂತೋಷ್, ಪ್ರತಿನಿತ್ಯ ಕಾಲೇಜು ಹಾಗೂ ಮನೆಗೆ ಓಡಾಡಲು ತನ್ನ ಸ್ನೇಹಿತನ ಬಳಿ ಮೂರು ಸಾವಿರಕ್ಕೆ ಸೈಕಲೊಂದನ್ನು ಖರೀದಿ ಮಾಡಿರುತ್ತಾನೆ. ನಂತರ ಅದೇ ಸೈಕಲ್ ಕಾಲೇಜಿಗೆ ತೆಗೆದುಕೊಂಡು ಹೋದಾಗ ಅದು ಕಳ್ಳತನ ಮಾಡಿರುವ ಸೈಕಲ್ ಎಂದು ತಿಳಿದುಬಂದಿದೆ.
ನಿನ್ನೆ ಸ್ನೇಹಿತ ಸೈಕಲ್ನನ್ನು ಕದ್ದು ಮಾರಾಟ ಮಾಡಿದ್ದಾನೆ ಎಂದು ಸೈಕಲ್ನ ಮೂಲ ವಾರಸುದಾರ ಕಾಲೇಜ್ಗೆ ಬಂದಿದ್ದಾನೆ. ಗಲಾಟೆ ನಂತರ ಸೈಕಲ್ ತೆಗೆದುಕೊಂಡ ಹೋಗಿದ್ದರು. ನಂತರ ಕಾಲೇಜಿನ ಪ್ರಾಂಶುಪಾಲರೇ ಸಂತೋಷ್ನನ್ನು ಮನೆಗೆ ಬಿಟ್ಟಿದ್ದರು.
ನಗರದ ಮಾತಾ ಮಾಣಿಕೇಶ್ವರಿ ನಗರದಿಂದ ರಾಜಾಪುರ ಬಡವಾಣೆಗೆ ಹೋಗುವಾಗ ಅಪಹರಿಸಲಾಗಿದ್ದು, ನಂತರ ಸಂತೋಷ್ ನಂಬರ್ನಿಂದ ಆತನ ಸಹೋದರನಿಗೆ ಕರೆ ಮಾಡಲಾಗಿದೆ. ಈ ಸಂದರ್ಭದಲ್ಲಿ ನನ್ನನ್ನು ಏನೂ ಮಾಡಬೇಡಿ ಎಂದು ಸಂತೋಷ್ ಬೇಡಿಕೊಳ್ಳುತ್ತಿದ್ದ ಶಬ್ದ ಕೇಳಿದೆ. ಇದಾದ ಬಳಿಕ ಆತನ ಮೊಬೈಲ್ ಸ್ವಿಚ್ ಆಫ್ ಆಗಿದೆ.
ಸಂಜೆ ಟ್ಯೂಶನ್ ಗೆ ಹೋಗುವಾಗ ಆತ ಅಪಹರಣವಾಗಿರುವುದಾಗಿ ಕುಟುಂಬಸ್ಥರು ಹೇಳಿದ್ದಾರೆ. ಸದ್ಯ ವಿಶ್ವವಿದ್ಯಾಲಯದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.