ಹಿಜಾಬ್ ವಿವಾದ: ಶಾಂತಿಯುತ ಬಂದ್ ಅವರ ಹಕ್ಕು: ಸಿದ್ದರಾಮಯ್ಯ | JANATA NEWS
ಬೆಂಗಳೂರು : ಹಿಜಾಬ್ ಕುರಿತ ಹೈಕೋರ್ಟ್ ತೀರ್ಪಿನ ವಿರುದ್ದ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಂದ್, ಪ್ರತಿಭಟನೆ ಅವರ ಹಕ್ಕು, ಶಾಂತಿಯುತವಾಗಿ ಮಾಡಿಕೊಳ್ಳಲಿ, ಕೋರ್ಟ್ ಆದೇಶ ಧಿಕ್ಕರಿಸುತ್ತೇವೆ ಎಂದು ಹೇಳಿಲ್ಲ, ಅಸಮಾಧಾನ ಇದೆ ಹಾಗಾಗಿ ಪ್ರತಿಭಟನೆ ಮಾಡುತ್ತೇವೆ ಎಂದಿದ್ದಾರೆ.
ಹೈಕೋರ್ಟ್ ಆದೇಶವನ್ನು ಪ್ರಶ್ನೆ ಮಾಡಿ ಅಪೀಲು ಮಾಡಲು ಅವಕಾಶ ಇದೆ. ಅದರ ಜೊತೆಗೆ ಅಸಮಾಧಾನ ಇದೆ ಎಂದು ಶಾಂತಿಯುತವಾಗಿ ಬಂದ್ ಮಾಡಿದರೆ ಸರ್ಕಾರ ಹೇಗೆ ನಿಲ್ಲಿಸಲು ಸಾಧ್ಯ? ಎಂದು ಪ್ರಶ್ನಿಸಿದರು.
ಹೈಕೋರ್ಟ್ ಜಡ್ಜ್ ಮೆಂಟ್ ಗೆ ನನ್ನ ವಿರೋಧ ಇಲ್ಲ. ಆದರೆ ತೀರ್ಪಿನ ಬಗ್ಗೆ ಅಸಮಾಧಾನವಿದೆ ಎಂದು ಸುಪ್ರೀಂ ಕೋರ್ಟ್ ಗೆ ಅಪೀಲು ಮಾಡಿದ್ದು ಅಸಮಾಧಾನದ ಕಾರಣಕ್ಕಾಗಿಯೇ ಅಲ್ಲವೇ? ಅದೇ ರೀತಿ ಶಾಂತಿಯುತವಾಗಿ ಬಂದ್ ಮಾಡುತ್ತೇವೆ ಅಂದಿದ್ದಾರೆ. ಅದು ಅವರ ಹಕ್ಕು. ಮಾಡಿಕೊಳ್ಳಲಿ ಬಿಡಿ, ಅದಕ್ಕೆ ಏಕೆ ಅಡ್ಡಿ ಪಡಿಸುತ್ತೀರಾ? ಎಂದು ಪ್ರಶ್ನಿಸಿದರು.