ಹೋಳಿ ಪರಿಸರ ಸ್ನೇಹಿಯಾಗಿರಲಿ: ಸಿಎಂ ಬೊಮ್ಮಾಯಿ ಶುಭಾಶಯ | JANATA NEWS
ಬೆಂಗಳೂರು : ರಾಜ್ಯದಾದ್ಯಂತ ಸಡಗರ ಹಾಗೂ ಸಂಭ್ರಮದಿಂದ ಹೋಳಿ ಹಬ್ಬವನ್ನು ಆಚರಿಸಲಾಗುತ್ತಿದ್ದು, ಗಣ್ಯರು ಹಾಗೂ ನಾಯಕರು ಹೋಳಿ ಹಬ್ಬಕ್ಕೆ ಶುಭ ಕೋರುತ್ತಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ಅವರು, ನಾಡಿನ ಸಮಸ್ತ ಜನತೆಗೆ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮೂಲಕ ಜನರಿಗೆ ಶುಭ ಕೋರಿದ್ದಾರೆ. ಹಬ್ಬವು ಜೀವನದಲ್ಲಿ ಸಂತೋಷದ ಬಣ್ಣವನ್ನು ತರಲಿ ಎಂದು ಅವರು ಹಾರೈಸಿದರು. "ನಿಮ್ಮೆಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು. ಪರಸ್ಪರ ಪ್ರೀತಿ, ವಾತ್ಸಲ್ಯ ಮತ್ತು ಸಹೋದರತ್ವದ ಸಂಕೇತವಾಗಿರುವ ಈ ಹೋಳಿ ಹಬ್ಬವು ಜೀವನದಲ್ಲಿ ಸಂತೋಷದ ಬಣ್ಣವನ್ನು ತರಲಿ" ಎಂದು ಪ್ರಧಾನಿ ಟ್ವೀಟ್ ಟ್ವೀಟ್ ಮಾಡಿದ್ದಾರೆ.
ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿ ಹೋಳಿಯ ಶುಭಾಶಯ ಕೋರಿದ್ದಾರೆ. ನಾಡಿನ ಸಮಸ್ತ ಜನತೆಗೆ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಕೆಟ್ಟದನ್ನು ದಹಿಸಿ, ಒಳ್ಳೆಯದನ್ನು ಉಳಿಸಿಕೊಳ್ಳಿ ಎಂಬ ಸಂದೇಶ ಸಾರುವ ಈ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸೋಣ. ನಮ್ಮೆಲ್ಲರ ಜೀವನಗಳಲ್ಲಿ ಆರೋಗ್ಯ, ಸಮೃದ್ಧಿ, ಸಂತಸ, ಸಂಭ್ರಮದ ಬಣ್ಣಗಳೇ ಸದಾ ತುಂಬಿರಲಿ ಎಂದು ಅವರು ಶುಭಾಶಯ ಕೋರಿದ್ದಾರೆ.