ಮದ್ಯಪಾನ ಮಾಡಿ ಪಾಠ ಮಾಡ್ತಿದ್ದ ಶಿಕ್ಷಕ ಸಸ್ಪೆಂಡ್! | JANATA NEWS
ತುಮಕೂರು : ಕರ್ತವ್ಯದ ವೇಳೆ ಮದ್ಯಪಾನ ಮಾಡಿ ಶಾಲೆಗೆ ಆಗಮಿಸಿದ ಶಿಕ್ಷಕನನ್ನು ಅಮಾನತು ಮಾಡಿದ ಘಟನೆ ತಾಲೂಕಿನ ಹೊಸಕೆರೆ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ನಡೆದಿದೆ.
ವಿ.ಕಾಂತರಾಜು ಮದ್ಯಪಾನ ಮಾಡಿ ಶಾಲೆಗೆ ಹಾಜರಾಗಿದ್ದರು. ಒಂದೂವರೆ ತಿಂಗಳ ಹಿಂದೆ ರಾಮನಗರ ಜಿಲ್ಲೆಯಿಂದ ಕುಣಿಗಲ್ ತಾಲ್ಲೂಕಿನ ಹೊಸಕೆರೆ ಶಾಲೆಗೆ ಇವರು ವರ್ಗಾವಣೆ ಗೊಂಡಿದ್ದರು.
ಇವರು ಕುಡಿದು ಬಂದು ಪಾಠ ಮಾಡುತ್ತಿದ್ದುದರಿಂದ ಗ್ರಾಮಸ್ಥರು. ಬಿಇಒ ತಿಮ್ಮರಾಜುಗೆ ದೂರು ನೀಡಿದ್ದರು.
ಈ ವೇಳೆ ಶಿಕ್ಷಕ ಮದ್ಯಪಾನ ಮಾಡಿರುವುದು ಕಂಡು ಬಂದಿದ್ದು, ಕಾಂತರಾಜು ಅವರನ್ನು ಅಧಿಕಾರಿಗಳು ಕುಣಿಗಲ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಹಾಜರುಪಡಿಸಿ, ತಪಾಸನೆ ನಡೆಸಿದ್ದಾರೆ.
ತಪಾಸಣೆ ವೇಳೆ ಶಿಕ್ಷಕ ಮಧ್ಯಪಾನ ಮಾಡಿರುವುದಾಗಿ ವೈದ್ಯಾಧಿಕಾರಿಗಳು ದೃಢವಾಗಿದ್ದರಿಂದ ಅಮಾನತು ಮಾಡಲಾಗಿದೆ.