ಬುಲೆಟ್ ರೈಲಿಗೆ ಭಾರತದ ಮಣ್ಣು ಯೋಗ್ಯವಾಗಿಲ್ಲ ಎಂದ ಟಿಎಂಸಿ ಸಂಸದೆ ವಿರುದ್ಧ ರೇಲ್ವೆ ಮಂತ್ರಿ ವಾಗ್ದಾಳಿ | JANATA NEWS
ನವದೆಹಲಿ : ದೇಶದಲ್ಲಿ ಬುಲೆಟ್ ರೈಲು ಯೋಜನೆ ವಿರುದ್ಧ ಲೋಕಸಭೆಯಲ್ಲಿ ತೃಣ ಮೂಲ ಕಾಂಗ್ರೆಸ್(ಟಿಎಂಸಿ) ಸಂಸದೆ ನುಸ್ರತ್ ಜಹಾನ್ ಅವರ ಹೇಳಿಕೆಯನ್ನು, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಖಡಾಖಂಡಿತವಾಗಿ ತಳ್ಳಿ ಹಾಕಿದ್ದಾರೆ ಅಲ್ಲದೇ, ಟಿಎಂಸಿ ಸಂಸದರಿಗೆ ನಾಚಿಕೆಯಾಗಬೇಕು ಎಂದು ಪುನಃ ಪುನಃ ಉಚ್ಚರಿಸಿದ್ದಾರೆ.
ಭಾರತದ ಮಣ್ಣು ಯೋಗ್ಯವಾಗಿಲ್ಲ, ಬುಲೆಟ್ ರೈಲು ಕಾರ್ಯನಿರ್ವಹಿಸಲು, ಎಂದು ನುಸ್ರತ್ ಹೇಳಿದ ಒಂದು ದಿನದ ನಂತರ, ರೈಲ್ವೆ ಸಚಿವ ಅಶ್ವಿನಿ ಅವರು, ನುಸ್ರತ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡು ಮತ್ತು ಅವರ ಹೇಳಿಕೆ ನಾಚಿಕೆಗೇಡಿನ ಸಂಗತಿಯಾಗಿದೆ, ಎಂದಿದ್ದಾರೆ.
"ಮಾ, ಮಾತು, ಮಾನುಷ್" ಎಂದು ಘೋಷಣೆ ಕೂಗುವ ಟಿಎಂಸಿ ಗೆ ನಮ್ಮ ದೇಶದ ಸಾಮರ್ಥ್ಯದ ಬಗ್ಗೆ ಅನುಮಾನವಿದೆ, ಎಂದು ಮಮತಾ ಪಕ್ಷದ ಮೇಲೆ ದಾಳಿ ಮಾಡಿದ ಸಚಿವ ಅಶ್ವಿನಿ ಹೇಳಿದರು, "ಮಾ, ಮಾತು, ಮಾನುಷ ಬಗ್ಗೆ ಮಾತನಾಡುವವರು ಮಾ(ಮಾತೆಯನ್ನು) ನಂಬುವುದಿಲ್ಲ, ಮಾಟಿ(ಮಣ್ಣನ್ನೂ) ನಂಬುವುದಿಲ್ಲ. ಇವರು ಯಾವ ರೀತಿಯ ಮಾನುಷ್(ಮನುಷ್ಯರು)?" ಎಂದು ಪ್ರಶ್ನಿಸಿದ್ದಾರೆ.
"ಬುಲೆಟ್ ರೈಲುಗಳಿಗೆ ಭಾರತದ ಮಣ್ಣು ಅಲ್ಲ ಎಂದು ಯಾರು ಹೇಳುತ್ತಾರೆ? ಇದು ನಾಚಿಕೆಗೇಡಿನ ವಿಷಯ. ಇದು ತುಂಬಾ ನಾಚಿಕೆಗೇಡಿನ ಸಂಗತಿ. ನಾವು ನಮ್ಮ ಎಂಜಿನಿಯರ್ಗಳು ಮತ್ತು ನಮ್ಮ ಸಾಮರ್ಥ್ಯಗಳನ್ನು ನಂಬಬೇಕು. ಇದು ಈ ರೀತಿ ಕೆಲಸ ಮಾಡುವುದಿಲ್ಲ. ನಾವು ಎಷ್ಟು ದಿನ ವಿದೇಶಿಯರ ಮೇಲೆ ಅವಲಂಬಿತರಾಗಬೇಕು? ನಮ್ಮ ಎಂಜಿನಿಯರ್ಗಳು ಮತ್ತು ನಮ್ಮ ಸಾಮರ್ಥ್ಯಗಳನ್ನು ನೀವು ನಂಬಬೇಕು" ಎಂದು ಸಚಿವ ಅಶ್ವಿನಿ ಒತ್ತಾಯಿಸಿದರು.