ಪಾವಗಡ ಬಸ್ ಅಪಘಾತ: ಬಸ್ ಅಪಘಾತಕ್ಕೂ ಮುನ್ನದ ದೃಶ್ಯ ಸಿಸಿಟಿವಿಯಲ್ಲಿ ಸೆರೆ | JANATA NEWS
ತುಮಕೂರು : ನಿನ್ನೆ ನಡೆದಂತ ಪಾವಗಡದ ಪಳವಳ್ಳಿ ಬಳಿಯ ಖಾಸಗಿ ಬಸ್ ಅಪಘಾತ ಪ್ರಕರಣದ ಹಿಂದಿನ ರಹಸ್ಯ ಬಯಲಾಗಿದೆ. ಪಾವಗಡ ಸಮೀಪ ಪಳವಳ್ಳಿಕಟ್ಟೆ ಬಳಿ ಶನಿವಾರ ನಡೆದ ಬಸ್ ಅಪಘಾತದಲ್ಲಿ 6 ಮಂದಿ ಮೃತಪಟ್ಟಿದ್ದು, 40 ಕ್ಕೂ ಹೆಚ್ಚು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತಕ್ಕೂ ಮೊದಲಿನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ನಡೆದ ಪಾವಗಡ ತಾಲೂಕಿನ ವೈಎನ್ ಹೊಸಕೋಟೆ ಮತ್ತು ಪಾವಗಡ ನಡುವಿನ ಬುಡ್ಡಾರೆಡ್ಡಿಹಳ್ಳಿ ಟೋಲ್ ಬರುವ ವೇಳೆಗೆ ಬಸ್ ಟಾಪ್ ಮೇಲೆ ನಲವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಕುಳಿತಿರುವ ದೃಶ್ಯವನ್ನು ಸಿಸಿಟಿವಿಯಲ್ಲಿ ನೋಡಬಹುದಾಗಿದೆ.
ಬಸ್ ನಲ್ಲಿ 127 ಜನರಿದ್ದರು ಎನ್ನಲಾಗಿದೆ. ಅಪಘಾತಕ್ಕೆ ಬಸ್ ಸ್ಟೇರಿಂಗ್ ಕಟ್ ಆಗಿದ್ದೇ ಕಾರಣ ಎನ್ನಲಾಗುತ್ತಿದೆ.
ಜಿಲ್ಲೆಯ ಸೂಲನಾಯಕನಹಳ್ಳಿಯ ಅಮೂಲ್ಯ(16), ಅಜಿತ್ (18), ಬೆಸ್ತರಹಳ್ಳಿಯ ಶಹನವಾಜ್ (18), ವೈ.ಎನ್.ಹೊಸಕೋಟೆಯ ಕಲ್ಯಾಣ್(18), ದಾದುವಲ್ಲಿ(26), ಹೃಷಿಕಾ(21) ಮೃತರು. ಘಟನೆಗೆ ಸಂಬಂಧಿಸಿ ಪಾವಗಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.