ರಂಗಭೂಮಿ ಕಲಾವಿದೆ ಮೇಲೆ ಸಹಪಾಠಿಗಳಿಂದಲೇ ಆಯಸಿಡ್ ದಾಳಿ! | JANATA NEWS
ಬೆಂಗಳೂರು : ರಂಗಭೂಮಿ ಕಲಾವಿದೆಯೊಬ್ಬರ ಮೇಲೆ ಆಯಸಿಡ್ ದಾಳಿ ಮಾಡಿರುವ ಘಟನೆ ನಗರದ ನಂದಿನಿಲೇಔಟ್ನ ಗಣೇಶ ಬ್ಲಾಕ್ನಲ್ಲಿ ನಡೆದಿದೆ. ಆ್ಯಸಿಡ್ ದಾಳಿ ನಡೆಸಿದ ಪ್ರಕರಣದ ಸಂಬಂಧ ನಂದಿನಿಲೇಔಟ್ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ನಂದಿನಿ ಲೇಔಟ್ನ ಗಣೇಶ ಬ್ಲಾಕ್ನಲ್ಲಿ ವಾಸವಾಗಿರುವ ದೇವಿ, 18 ರಂದು ಮನೆಯ ಜಗಲಿಯ ಮೇಲೆ ಮಲಗಿದ್ದ ವೇಳೆ ಆಯಸಿಡ್ ದಾಳಿ ಮಾಡಲಾಗಿದೆ.
ದೇವಿ ಅವರು ಈ ಹಿಂದೆ ಬಿಎಂಟಿಸಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ರಂಗಭೂಮಿ ಕ್ಷೇತ್ರದಲ್ಲಿ ನಟಿಯಾಗಿ ತೊಡಗಿಸಿಕೊಂಡಿದ್ದರು.
ರಮೇಶ್, ಸ್ವಾತಿ ಹಾಗೂ ಯೋಗೇಶ್ ಎಂಬುವರನ್ನು ಬಂಧಿಸಿ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ದೇವಿಯವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಂಬಂಧ ನಂದಿನಿಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.