ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳೆ ಹೆಜ್ಜೇನು ದಾಳಿ: ಪರೀಕ್ಷಾರ್ಥಿಗಳು ಆಸ್ಪತ್ರೆಗೆ | JANATA NEWS
ಹುಬ್ಬಳ್ಳಿ : ಕೇಶ್ವಾಪುರದ ಸಂತ ಮೈಕಲ್ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾರ್ಥಿಗಳು, ಶಿಕ್ಷಕರು, ಪಾಲಕರು ಹಾಗೂ ಪೊಲೀಸರ ಮೇಲೆ ಹೆಜ್ಜೇನು ದಾಳಿ ಮಾಡಿದ ಘಟನೆ ಸೋಮವಾರ ನಡೆದಿದೆ.
ಶಾಲಾ ಕಾಂಪೌಂಡ್ ಹೊರಗಡೆ ಮರದಲ್ಲಿ ಜೇನುನೊಣಗಳು ಗೂಡುಕಟ್ಟಿದ್ದವು. ಯಾರೋ ಕಿಡಿಗೇಡಿಗಳು ಜೇನುಗೂಡಿಗೆ ಕಲ್ಲು ಎಸೆದಿದ್ದು, ಎಕ್ಸಾಂ ಹಾಲ್ ತುಂಬಾ ಆವರಿಸಿದ ಜೇನುಹುಳುಗಳು ದಾಳಿ ಮಾಡಿದ್ದು, ಭಯದಿಂದ ವಿದ್ಯಾರ್ಥಿಗಳು ದಿಕ್ಕಾಪಾಲಾಗಿ ಹೊರ ಓಡಿದರು.
ಇಬ್ಬರು ವಿದ್ಯಾರ್ಥಿಗಳು, ಮುಖ್ಯಶಿಕ್ಷಕ, ದೈಹಿಕ ಶಿಕ್ಷಕ, ಪೊಲೀಸ್ ಸಿಬ್ಬಂದಿ ಸೇರಿದಂತೆ ಒಟ್ಟು ಐವರನ್ನು ಕಚ್ಚಿವೆ. ಎಲ್ಲರಿಗೂ ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.
RELATED TOPICS:
English summary :SSLC test: Bee attacks - 5 students injury