ಜನರು ಸಂತೃಪ್ತಿಯಿಂದ ವ್ಯವಹಾರ ಮಾಡಿಕೊಂಡು ಹೋಗುತ್ತಿರುವುದು ಡಿ.ಕೆ. ಶಿವಕುಮಾರ್ ಗೆ ಇಷ್ಟ ಇಲ್ಲ ಅನ್ಸುತ್ತದೆ: ಕೆ.ಎಸ್.ಈಶ್ವರಪ್ಪ | JANATA NEWS
ಶಿವಮೊಗ್ಗ : ನಗರದಲ್ಲಿ ಶಾಂತಿಯಿಂದ ಜನರು, ತಮ್ಮ ವ್ಯಾಪಾರ ಮಾಡಿಕೊಂಡು ಹೋಗುತ್ತಿದ್ದಾರೆ. ಆದರೆ, ಡಿ.ಕೆ. ಶಿವಕುಮಾರ್ ಈ ಬಗ್ಗೆ ಆರೋಪ ಮಾಡುತ್ತಿರುವುದು ಸರಿಯಲ್ಲ. ಜನರು ಸಂತೃಪ್ತಿಯಿಂದ ವ್ಯವಹಾರ ಮಾಡಿಕೊಂಡು ಹೋಗುತ್ತಿರುವುದು ಡಿ.ಕೆ. ಶಿವಕುಮಾರ್ ಗೆ ಇಷ್ಟ ಇಲ್ಲ ಅನ್ಸುತ್ತದೆ ಎಂದು ಡಿ.ಕೆ.ಶಿ. ಆರೋಪಕ್ಕೆ ತಿರುಗೇಟು ಕೊಟ್ಟರು.
ಶಿವಮೊಗ್ಗದಲ್ಲಿ ಶಾಂತಿಗೆ ಭಂಗವುಂಟಾಗಿದೆ ಎಂದು ಡಿ.ಕೆ.ಶಿ. ಆರೋಪಕ್ಕೆ ಪ್ರತಿಕ್ರಿಯೆ ಕೊಟ್ಟ ಅವರು, ಹರ್ಷನ ಹತ್ಯೆ ಬಳಿಕ, ಆತನ ಕೊಲೆಗಡುಕರಿಗೆ ತಕ್ಷಣವೇ ಬಂಧಿಸಲಾಗಿದೆ. ಸರ್ಕಾರ ಈ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡಿದೆ. ಇದಕ್ಕಾಗಿ ರಾಜ್ಯದ ಜನರು ಸರ್ಕಾರಕ್ಕೆ ಶ್ಲಾಘಿಸುತ್ತಿದ್ದಾರೆ. ನಗರದಲ್ಲಿ ಶಾಂತಿಯಿಂದ ಜನರು, ತಮ್ಮ ವ್ಯಾಪಾರ ಮಾಡಿಕೊಂಡು ಹೋಗುತ್ತಿದ್ದಾರೆ. ಡಿ.ಕೆ.ಶಿ ಗೆ ಗೊಂದಲವೇ ಬೇಕು ಎನ್ನುವ ಅಪೇಕ್ಷೆ ಇರಬಹುದು. ಶಿವಮೊಗ್ಗದಲ್ಲಿ ಯಾವುದೇ ಗೊಂದಲವಿಲ್ಲ. ಶಾಂತಿಯಿಂದಿರಲು, ಜನರು ತೀರ್ಮಾನ ಮಾಡಿದ್ದಾರೆ ಎಂದರು.
ಮುಂದಿನ ಚುನಾವಣೆಯಲ್ಲೂ 150 ಕ್ಕೂ ಹೆಚ್ಚು ಸ್ಥಾನವನ್ನು ನಾವು ಗೆಲ್ಲುತ್ತೇವೆ. ಅವಧಿಗೂ ಮುನ್ನ ಯಾವುದೇ ಕಾರಣಕ್ಕೂ ಚುನಾವಣೆ ನಡೆಯಲ್ಲ. ಇಂತಹ ಸುದ್ಧಿಗಳು ಬರುತ್ತಲೇ ಇರುತ್ತೇವೆ. ಯಾವುದೇ ಸಂದರ್ಭದಲ್ಲಿ ಚುನಾವಣೆ ಬಂದರೂ ಎದುರಿಸುತ್ತೇವೆ ಎಂದರು.
ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಯಾವುದೇ ಕಾರಣಕ್ಕೂ ರಾಜ್ಯಾಧ್ಯಕ್ಷರ ಬದಲಾವಣೆ ಇಲ್ಲ. ನಮ್ಮ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಅವರು ಪ್ರತಿ ಹಳ್ಳಿ, ಹಳ್ಳಿಗೂ ಹೋಗಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಜಾತಿ, ಹಣ ಮೀರಿ, ಸಂಘಟನೆ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ಸಂಘಟನೆ ನೇತೃತ್ವದಲ್ಲೇ, ಪೂರ್ಣ ಬಹುಮತ ತರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.