ಮುಸ್ಕಾನ್, ಆಕೆಯ ತಂದೆ ಬಂಧಿಸಿ, ಅವರ ಮನೆಗೆ ಯಾರೆಲ್ಲಾ ಭೇಟಿ ನೀಡಿದ್ದಾರೆಂದು ತನಿಖೆ ನಡೆಸಿ: ಮುತಾಲಿಕ್ | JANATA NEWS
ಬೆಂಗಳೂರು : ಆಲ್ ಖೈದಾ ಸಂಘಟನೆಯನ್ನು ನಿಷೇಧಿಸಲಾಗಿದೆ. ಹೀಗಿದ್ದೂ ಮುಸ್ಕಾನ್ ಅವರನ್ನು ಹಾಡಿ ಹೊಗಳಿರುವಂತ ಆಲ್ ಖೈದ ಉಗ್ರ ಜವಹರಿ ವೀಡಿಯೋ ಬಂದಿದ್ದು ಎಲ್ಲಿಂದ.? ಹೇಗೆ ಬಂತು? ಕರ್ನಾಟಕದ ಮಂಡ್ಯ ಮೂಲದ ಮುಸ್ಕಾನ್ವರೆಗೂ ಹೇಗೆ ಬಂತು ಎನ್ನುವ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು.
ಮುಸ್ಕಾನ್ ಹೊಗಳಿ ಅಲ್ಖೈದಾ ಮುಖ್ಯಸ್ಥ ವೀಡಿಯೋ ಬಿಡುಗಡೆ ಮಾಡಿದ ವಿಚಾರವಾಗಿ, ಸಿದ್ದರಾಮಯ್ಯ ಆರ್ಎಸ್ಎಸ್ ಮಾಡಿಸಿದ ವೀಡಿಯೋ ಎಂಬ ಹೇಳಿಕೆ ನೀಡಿದ್ದರು. ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಪ್ರಮೋದ್ ಮುತಾಲಿಕ್, ಅಲ್ಖೈದಾ ಜವಹರಿ ಮುಸ್ಕಾನ್ ಹೊಗಳಿದ್ದು ಅತ್ಯಂತ ಖಂಡನೀಯವಾದದ್ದು. ಇದು ಅಷ್ಟು ಹಗುರವಾಗಿ ತೆಗೆದುಕೊಳ್ಳುವ ಹಾಗಿಲ್ಲ ಎಂದು ಹೇಳಿದರು.
ಮಂಡ್ಯದ ಮುಸ್ಕಾನ್ ಹಾಗೂ ಆಕೆಯನ್ನು ಬಂಧಿಸಬೇಕು. ಅಲ್ಲದೇ ಈವರೆಗೆ ಅವರ ಮನೆಗೆ ಯಾರೆಲ್ಲಾ ಭೇಟಿ ನೀಡಿದ್ದಾರೆ ಎಂಬುದನ್ನು ವಿಚಾರಣೆ ನಡೆಸುವಂತೆ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಒತ್ತಾಯಿಸಿದ್ದಾರೆ.
ಕರ್ನಾಟಕದ ಮಂಡ್ಯದ ಮುಸ್ಕಾನ್ ನನ್ನು, ಆಲ್ ಖೈದಾ ಜವಹರಿ ಹೊಗಳಿದ್ದು ಖಂಡನೀಯವಾಗಿದೆ. ಮಂಡ್ಯದ ಮುಸ್ಕಾನ್ ವರೆಗೆ ಆಲ್ ಖೈದಾ ಉಗ್ರ ಮಾತನಾಡುವಂತೆ ಆದದ್ದು ಹೇಗೆ ಎನ್ನುವ ಕುರಿತಂತೆಯೂ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.