ಪಾನಮತ್ತರಾಗಿ ಗುರುದ್ವಾರ ಪ್ರವೇಶಿಸಿದ ಪಂಜಾಬ್ ಸಿಎಂ ಭಗವಂತ್ ಮಾನ್ ವಿರುದ್ಧ ಪೊಲೀಸ್ ದೂರು ದಾಖಲು | JANATA NEWS
ಚಂಡೀಗಢ : ಪಂಜಾಬ್ನ ಆಮ್ ಆದ್ಮಿ ಪಾರ್ಟಿ(ಎಎಪಿ) ಸರ್ಕಾರದ ನೂತನ ಮುಖ್ಯಮಂತ್ರಿ ಭಗವಂತ್ ಮಾನ್ ಮದ್ಯಪಾನ ಮಾಡಿ ಗುರುದ್ವಾರ ಪ್ರವೇಶಿಸಿದ ತಪ್ಪಿನ ಬಿಸಿ ಅನುಭವಿಸುತ್ತಿದ್ದಾರೆ.
ಕುಡಿದು ಗುರುದ್ವಾರ ಒಳ ಪ್ರವೇಶಿಸಿದ ಆರೋಪದ ಮೇಲೆ ಸಿಎಂ ಭಗವಂತ್ ಮಾನ್ ವಿರುದ್ಧ ಅವರದೇ ರಾಜ್ಯದಲ್ಲಿ ಪೊಲೀಸ್ ದೂರು ದಾಖಲಾಗಿದೆ.
ನಿನ್ನೆ, ಶನಿವಾರ, ಬಿಜೆಪಿ ನಾಯಕ ತಜೀಂದರ್ ಪಾಲ್ ಸಿಂಗ್ ಬಗ್ಗಾ ಅವರು, ಕುಡಿದ ಸ್ಥಿತಿಯಲ್ಲಿ ಗುರುದ್ವಾರಕ್ಕೆ ಪ್ರವೇಶಿಸಿದ ಸಿಎಂ ಭಗವಂತ್ ಮಾನ್ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಅಲ್ಲದೆ ತನ್ನ ದೂರಿನ ಬಗ್ಗೆ ಕ್ರಮ ಕೈಗೊಳ್ಳುವಂತೆ ಪಂಜಾಬ್ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಮಾಡಿದ್ದಾರೆ.
"ಗುರುದ್ವಾರ ದಮ್ದಮಾ ಸಾಹಿಬ್ಗೆ ಕುಡಿದ ಸ್ಥಿತಿಯಲ್ಲಿ ಪಂಜಾಬ್ ಸಿಎಂ @ಭಗವಂತ್ಮಾನ್ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆದ್ದೇನೆ. ನನ್ನ ದೂರಿನ ಬಗ್ಗೆ ಕ್ರಮ ಕೈಗೊಳ್ಳಲು @DGPPunjabPolice @PunjabPoliceInd ಗೆ ನಾನು ವಿನಂತಿಸುತ್ತೇನೆ." ಎಂದು ಟ್ವಿಟರ್ನಲ್ಲಿ ಬಿಜೆಪಿ ನಾಯಕ ಬಗ್ಗಾ ತಮ್ಮ ದೂರಿನ ಸ್ಕ್ರೀನ್ಶಾಟ್ ಅನ್ನು ಹಂಚಿಕೊಂಡಿದ್ದಾರೆ.
ಇದಕ್ಕೂ ಮುನ್ನ ಶುಕ್ರವಾರ, ಏಪ್ರಿಲ್ 14 ರಂದು ದೇಶಾದ್ಯಂತ ಆಚರಿಸಲಾದ ಬೈಸಾಖಿ ಸಂದರ್ಭದಲ್ಲಿ ಪಂಜಾಬ್ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ(ಎಎಪಿ) ನಾಯಕ ಭಗವಂತ್ ಸಿಂಗ್ ಮಾನ್ ಅವರು ತಖ್ತ್ ದಮದಾಮಾ ಸಾಹಿಬ್ಗೆ ಕುಡಿದ ಸ್ಥಿತಿಯಲ್ಲಿ ತಖ್ತ್ ದಮ್ದಮಾ ಸಾಹಿಬ್ ಪ್ರವೇಶಿಸಿದ್ದಾರೆ ಎಂದು ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿ(ಎಸ್ಜಿಪಿಸಿ) ಆರೋಪಿಸಿದೆ. ಇದಕ್ಕಾಗಿ ಪಂಜಾಬ್ ಮುಖ್ಯಮಂತ್ರಿ ಕ್ಷಮೆಯಾಚಿಸಬೇಕು ಎಂದು ಸಮಿತಿ ಒತ್ತಾಯಿಸಿತ್ತು. ಈ ಕೃತ್ಯವು ಸಿಖ್ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ವಾಗ್ದಾಳಿ ನಡೆಸಿತ್ತು.
ಇತ್ತೀಚೆಗೆ ಬಗ್ಗಾ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳು, ದ್ವೇಷ ಮತ್ತು ಕ್ರಿಮಿನಲ್ ಬೆದರಿಕೆಗಾಗಿ ಪಂಜಾಬ್ ಸರ್ಕಾರವು ಪ್ರಕರಣ ದಾಖಲಿಸಿದೆ. ಎಎಪಿ ನಾಯಕ ಸನ್ನಿ ಅಹ್ಲುವಾಲಿಯಾ ಅವರು ಬಗ್ಗಾ ವಿರುದ್ಧ ದೂರು ದಾಖಲಿಸಿದ್ದರು, ನಂತರ ಏಪ್ರಿಲ್ 3 ರಂದು ಪ್ರಕರಣ ದಾಖಲಿಸಲಾಗಿತ್ತು.
Filed Police complaint against Punjab CM @BhagwantMann for Entering Gurudwara Damdama Sahib in Drunk Condition. I request @DGPPunjabPolice @PunjabPoliceInd to take action on my complaint pic.twitter.com/3bde4i32zI
— Tajinder Pal Singh Bagga (@TajinderBagga) April 16, 2022