ಪಿಎಸ್ಐ ನೇಮಕಾತಿ ಅಕ್ರಮ : ಕಿಂಗ್ಪಿನ್ ಗೂ ಗೃಹ ಸಚಿವ ಅರಗ ಜ್ಞಾನೆಂದ್ರರ ನಡುವೆ ಇರುವ ಲಿಂಕ್ ಏನು.? - ದಿನೇಶ್ ಗುಂಡುರಾವ್ | JANATA NEWS
ಬೆಂಗಳೂರು : ಪಿಎಸ್ಐ ನೇಮಕಾತಿಯಲ್ಲಿನ ಅಕ್ರಮದ ಆರೋಪಿತ ಕಿಂಗ್ಪಿನ್ ದಿವ್ಯಾ ಹಾಗರಗಿಗೂ ಬಿಜೆಪಿ ಮುಖಂಡರ ನಡುವೆ ಏನು ಸಂಬಂಧವಿದೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಶಾಸಕ ದಿನೇಶ್ ಗುಂಡುರಾವ್ ಪ್ರಶ್ನಿಸಿದ್ದಾರೆ.
ಈ ಕುರಿತು ಮಾಜಿ ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ, ಗ್ರಹ ಸಚಿವ ಅರಗ ಜ್ಞಾನೇಂದ್ರ ಹಾಗೂ ಸಚಿವ ಶ್ರೀರಾಮಲು ಅವರ ಚಿತ್ರಗಳೊಂದಿಗೆ ದಿವ್ಯಾ ಹಾಗರಗಿಗೂ ಲಿಂಕ್ ಏನು ಎಂದು ಸರಣಿ ಪ್ರಶ್ನೆಗಳನ್ನೂ ಕೇಳಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪೋಸ್ಟ್ ಮಾಡಿದ್ದು,
ಅಕ್ರಮ 545 PSI ನೇಮಕಾತಿಯ ಕಿಂಗ್ಪಿನ್ ದಿವ್ಯಾ ಹಾಗರಗಿಗೂ ನಮ್ಮ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಅರಚಿಕೊಳ್ಳುತ್ತಿರುವ BJP ಯವರಿಗೆ ಕೆಲ ಪ್ರಶ್ನೆಗಳು.
1) ದಿವ್ಯಾ ಹಾಗರಗಿ ಕುಟುಂಬಕ್ಕೂ ಗೃಹ ಸಚಿವ ಅರಗ ಜ್ಞಾನೆಂದ್ರರ ನಡುವೆ ಇರುವ ಲಿಂಕ್ ಏನು.?
2) ದಿವ್ಯಾ ಹಾಗರಗಿ ನಿವಾಸಕ್ಕೆ ಗೃಹ ಸಚಿವ ಯಾವ ಡೀಲ್ ಕುದುರಿಸಲು ಭೇಟಿ ಕೊಟ್ಟಿದ್ದರು.?
3) PSI ನೇಮಕಾತಿಯ 200 ಕೋಟಿ ಲಂಚದಲ್ಲಿ ದಿವ್ಯಾ ಹಾಗರಗಿಯಿಂದ ಗೃಹ ಸಚಿವರಿಗೆ ಬಂದ ಪಾಲೆಷ್ಟು.?
4)ಲಂಚದ ಹಣದಲ್ಲೂ ಈ ಸರ್ಕಾರಕ್ಕೆ 40 ಪರ್ಸೆಂಟ್ ಪಾಲು ಸಿಕ್ಕಿದೆಯೇ ಅಥವಾ ಡಿಸ್ಕೌಂಟ್ ಸಿಕ್ಕಿದೆಯೇ.?
5) ದಿವ್ಯಾ BJP ಯವರಲ್ಲದಿದ್ದರೆ BSY ರವರು CM ಆಗಿದ್ದಾಗ ದಿವ್ಯಾರನ್ನು ನರ್ಸಿಂಗ್ ಕೌನ್ಸಿಲ್ ಸದಸ್ಯರಾನ್ನಾಗಿ ಮಾಡಿದ್ದು ಯಾವ ಮಾನದಂಡದ ಮೇಲೆ
ಅಕ್ರಮ PSI ನೇಮಕಾತಿಯ ಕಿಂಗ್ಪಿನ್ ದಿವ್ಯಾ ಹಾಗರಗಿ BJPಯ ಸಕ್ರಿಯ ಕಾರ್ಯಕರ್ತೆ ಮತು ಮುಖಂಡೆ. PSI ನೇಮಕಾತಿ ಅಕ್ರಮದಲ್ಲಿ ಹಾಗರಗಿ ಜೊತೆ ಇಡೀ ಸರ್ಕಾರವೇ ಶಾಮೀಲಾಗಿ ದಂಧೆ ನಡೆಸಿದೆ. ಈಗ ದಿವ್ಯಾ ಹಾಗರಗಿಗೂ ನಮಗೂ ಸಂಬಂಧವಿಲ್ಲ ಎಂದು ಬಿಜೆಪಿಯವರು ಹೇಳಿಕೊಂಡರೆ ಯಾರದರೂ ನಂಬಲು ಸಾಧ್ಯವೆ.?
ಎಂದು ಪ್ರಶ್ನಿಸಿದ್ದಾರೆ.