ಕೊಳಚೆ ನೀರಲ್ಲಿ ಬಿದ್ದು ಮುಳುಗಿ 4 ವರ್ಷದ ಕಂದಮ್ಮ ಸಾವು | JANATA NEWS
ಬಳ್ಳಾರಿ : ಕೊಳಚೆ ನೀರಲ್ಲಿ ಮುಳುಗಿ ನಾಲ್ಕು ವರ್ಷದ ಮಗು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಬಳ್ಳಾರಿ ಜಿಲ್ಲೆಯ ಕೆ ವೀರಾಪುರ ಗ್ರಾಮದಲ್ಲಿ ನಡೆದಿದೆ.
ವೀರಾಪುರ ಗ್ರಾಮದ ಬಸವರಾಜ್ ಹಾಗೂ ಜ್ಯೋತಿ ಅವರ ಸೋಮೇಶ್(4) ಸಾವನ್ನಪ್ಪಿದ ಮಗು.
ಇಂದು ಬೆಳಗ್ಗೆ ಮನೆಯ ಎದುರು ಆಟ ಆಡುತ್ತಾ ಕೊಳಚೆ ನೀರಲ್ಲಿ ಬಿದ್ದಿದೆ ಎನ್ನಲಾಗಿದೆ. ಮನೆಯ ಮುಂಭಾಗದಲ್ಲಿ ಮಗು ಕಾಣದ ಹಿನ್ನೆಲೆ ತಾಯಿ ಹುಡುಕಾಟ ನಡೆಸಿದ್ದ ವೇಳೆ ಕೊಳೆಚೆ ನೀರಿನಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ. ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
English summary :4 year old baby dies after falling into sewage