ಪಶ್ಚಿಮ ಬಂಗಾಳದಲ್ಲಿ ಇಂದು ಮತ್ತೊಬ್ಬ ಬಿಜೆಪಿ ನಾಯಕನ ಹತ್ಯೆ : ಸಿಬಿಐ ತನಿಖೆಗೆ ಗೃಹ ಸಚಿವ ಅಮಿತ್ ಷಾ ಆಗ್ರಹ | JANATA NEWS
ಕೊಲ್ಕೊತ್ತಾ : ಕೇಂದ್ರ ಗೃಹ ಸಚಿವ ಅಮಿತ್ ಶಾ ಪಶ್ಚಿಮ ಬಂಗಾಳದ ಕಾಶಿಪುರದಲ್ಲಿ ಭಾರತೀಯ ಜನತಾ ಯುವ ಮೋರ್ಚಾ(ಬಿಜೆವೈಎಂ) ನಾಯಕ ಅರ್ಜುನ್ ಚೌರಾಸಿಯಾ ಅವರ ಕುಟುಂಬವನ್ನು ಭೇಟಿ ಮಾಡಿದರು. ಇಂದು ಕಾಶಿಪುರದಲ್ಲಿ ಚೌರಾಸಿಯಾ ಅವರ ಶವ ಪತ್ತೆಯಾಗಿತ್ತು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಗೃಹ ಸಚಿವ ಶಾ, ನಿನ್ನೆ ಟಿಎಂಸಿ ಸರ್ಕಾರ ಅಧಿಕಾರಕ್ಕೆ ಒಂದು ವರ್ಷ ಪೂರೈಸಿದೆ, ಇಂದು ರಾಜ್ಯದಲ್ಲಿ ರಾಜಕೀಯ ಕೊಲೆಗಳು ಆರಂಭವಾಗಿವೆ, ಅರ್ಜುನ್ ಚೌರಾಸಿಯಾ ಹತ್ಯೆಯನ್ನು ಬಿಜೆಪಿ ಖಂಡಿಸುತ್ತದೆ, ನಾನು ದುಃಖಿತ ಕುಟುಂಬವನ್ನು ಭೇಟಿ ಮಾಡಿದ್ದೇನೆ, ಅವರ ಅಜ್ಜಿಯನ್ನೂ ಥಳಿಸಲಾಗಿದೆ. ಘಟನೆಯ ಕುರಿತು ಸಿಬಿಐ ತನಿಖೆಗೆ ಬಿಜೆಪಿ ಆಗ್ರಹಿಸಿದೆ.
ಪಶ್ಚಿಮ ಬಂಗಾಳದ ಕಾಶಿಪುರದಲ್ಲಿ ಬಿಜೆವೈಎಂ ನಾಯಕ ಅರ್ಜುನ್ ಚೌರಾಸಿಯಾ ಅವರ "ಕೊಲೆ" ಕುರಿತು, ಕೇಂದ್ರ ಗೃಹ ಸಚಿವಾಲಯ ಷಾ ಅವರು ಘಟನೆಯ ಬಗ್ಗೆ ಗಮನ ಹರಿಸಿದ್ದಾರೆ ಮತ್ತು ಪಶ್ಚಿಮ ಬಂಗಾಳ ಸರ್ಕಾರದಿಂದ ವರದಿ ಕೇಳಿದ್ದಾರೆ, ಎಂದು ಎಎನ್ಐ ಟ್ವೀಟ್ ಮಾಡಿದೆ.
ಕಾಶಿಪುರದಲ್ಲಿ ಬಿಜೆಪಿ ಕಾರ್ಯಕರ್ತ ಅರ್ಜುನ್ ಚೌರಾಸಿಯಾ ಶವವಾಗಿ ಪತ್ತೆಯಾದ ಸ್ಥಳದಿಂದ ಪೊಲೀಸ್ ಪಡೆ ಪ್ರತಿಭಟನಾಕಾರರನ್ನು ತೆಗೆದುಹಾಕಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಹೊರತರಲು ಪ್ರತಿಭಟನಾಕಾರರು ಅವಕಾಶ ನೀಡುತ್ತಿರಲಿಲ್ಲ ಎನ್ನಲಾಗಿದೆ.