ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಯ ಹೊಸ ಯುವಶಕ್ತಿ ಉದಯವಾಗಲಿದೆ: ಸಿಎಂ ಬೊಮ್ಮಾಯಿ | JANATA NEWS
ಬೆಂಗಳೂರು : ಎಸ್ಎಂಕೆ ನಿವಾಸಕ್ಕೆ ತೆರಳಿದ ಸಿಎಂ ಬಸವರಾಜ ಬೊಮ್ಮಾಯಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಪಕ್ಷದ ತತ್ವ-ಸಿದ್ಧಾಂತ, ವಿಚಾರಗಳನ್ನು ಒಪ್ಪಿ ಬರುವವರನ್ನು ಸೇರಿಸಿಕೊಳ್ಳಲಾಗುವುದು. ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಯ ಹೊಸ ಯುವಶಕ್ತಿ ಉದಯವಾಗಲಿದೆ ಎಂದು ಹೇಳುವ ಮೂಲಕ ಗಮನಸೆಳೆದರು.
ಮಂಡ್ಯ ಸಮಾವೇಶದ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆಸುತ್ತೇವೆ ಎಂದು ಹೇಳಿದರು. ಅಲ್ಲದೆ ಬ್ಯಾಚ್ ವೈಸ್ ಬಿಜೆಪಿ ಸೇರಲು ಹಲವರು ರೆಡಿ ಆಗಿದ್ದಾರೆ. ಕೋಲಾರ, ಮಂಡ್ಯ ಭಾಗದಲ್ಲಿ ಬಿಜೆಪಿ ಸೇರುತ್ತಾರೆ. ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿಗೆ ಚೆನ್ನಾಗಿದೆ. ನಮ್ಮ ಪಕ್ಷದ ಮೇಲೆ ಯುವಕರಿಗೆ ಜಾಸ್ತಿ ಒಲವು ಇದೆ ಎಂದು ಹೇಳಿದರು.
ಕೋಲಾರದ ಮಾಲೂರು ಮಂಜುನಾಥ್ ಸೇರಿದಂತೆ ಮಂಡ್ಯದ ಹಲವರು ಬಿಜೆಪಿ ಸೇರುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಇದೇ ವೇಳೆ ಮಂಡ್ಯ ಭಾಗದಲ್ಲಿ ಪಕ್ಷ ಬಲವರ್ಧನೆ, ಮುಂದಿನ ಪಕ್ಷದ ಸಮಾವೇಶ, ಅನ್ಯ ಪಕ್ಷದವರ ಸೇರ್ಪಡೆಗೆ ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಆರ್.ಅಶೊಕ್ ಅವರು ಎಸ್ಎಂಕೆ ಬೆಂಬಲ ಕೋರಿದರು ಎನ್ನಲಾಗಿದೆ.