ಪಿಎಸ್ಐ ಅಕ್ರಮ: ತಮ್ಮನ ಬಂಧನ ಬೆನ್ನಲ್ಲೇ ಅಣ್ಣ ಆತ್ಮಹತ್ಯೆ! | JANATA NEWS
ಹಾಸನ : ಪಿಎಸ್ಐ ನೇಮಕಾತಿ ಹಗರಣದಲ್ಲಿ ಇತ್ತೀಚಿಗೆ ಸಿಐಡಿ ವಶಕ್ಕೆ ಪಡೆದಿದ್ದ ಅಭ್ಯರ್ಥಿಯ ಸಹೋದರರ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಹಾಸನ ಜಿಲ್ಲೆ ಹೊಳೆ ನರಸೀಪುರ ತಾಲೂಕಿನ ಒಗ್ಗರಣೆ ಬೀದಿಯಲ್ಲಿ ನಡೆದಿದೆ.
ವಾಸು(36) ಮೃತ ದುರ್ದೈವಿ. ಹೊಳೆನರಸೀಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಡಿ ಗ್ರೂಪ್ ನೌಕರನಾಗಿ ಕೆಲಸ ಮಾಡುತ್ತಿದ್ದ ವಾಸುನನ್ನು ಇತ್ತೀಚೆಗೆ ಕೆಲಸದಿಂದ ವಜಾ ಮಾಡಲಾಗಿತ್ತು. ವಾಸು ಸಹೋದರ ಮನುಕುಮಾರ್ ಪಿಎಸ್ಐ ಹುದ್ದೆಗೆ ಆಯ್ಕೆಯಾಗಿದ್ದ.
ಪಿಎಸ್ಐ ಹುದ್ದೆ ಹಗರಣ ಬಯಲಾಗುತ್ತಿದ್ದಂತೆ ಮನುಕುಮಾರ್ನನ್ನು ಇತ್ತೀಚಿಗೆ ಸಿಐಡಿ ಪೊಲೀಸರು ಬಂಧಿಸಿದ್ದರು. ಮನುಕುಮಾರ್ನ ಅಣ್ಣ ವಾಸು ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ.
ಸಿಐಡಿ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿರುವಾಗಲೇ ನೇಣುಬಿಗಿದುಕೊಂಡು ಸಾವನ್ನಪ್ಪಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪ್ರಕರಣ ಸಂಬಂಧಘಟನಾ ಸ್ಥಳಕ್ಕೆ ಭೇಟಿನೀಡಿರುವ ಪೊಲೀಸರು ದೂರು ದಾಖಲಿಸಕೊಂಡು ಪರಿಶೀಲನೆ ನಡೆಸಿದ್ದಾರೆ.
ಇದರ ಮದ್ಯೆಯೇ ತಮ್ಮನ ಪಿಎಸ್ ಐ ಕೆಲಸಕ್ಕೆ 40 ಲಕ್ಷ ಹಣ ಕೊಟ್ಟಿರುವ ಬಗ್ಗೆ ಮಾತು ಕೇಳಿಬರುತ್ತಿದ್ದು , ಮುಂಚಿತವಾಗಿ ತಮ್ಮನ ಕೆಲಸಕ್ಕೆ 10 ಲಕ್ಷ ಹಣ ಹೊಂದಿಸಿಕೊಟ್ಟಿದ್ದರು ಎಂದು ಹೇಳಲಾಗುತ್ತಿದೆ..