ನಾರಾಯಣಗುರು, ಭಗತ್ಸಿಂಗ್ ಪಾಠ ಕೈಬಿಟ್ಟಿಲ್ಲ, ಹೆಡಗೇವಾರ್ ಅವರ ವಿಚಾರವನ್ನು ಪಠ್ಯದಲ್ಲಿ ಸೇರಿಸಿರುವುದರಲ್ಲಿ ತಪ್ಪೇನಿದೆ? | JANATA NEWS
ಬೆಂಗಳೂರು : ಹೆಡಗೇವಾರ್ ಅವರ ವಿಚಾರವನ್ನು ಪಠ್ಯದಲ್ಲಿ ಸೇರಿಸಿರುವುದರಲ್ಲಿ ತಪ್ಪೇನಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಕೇಳಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೆಡ್ಗೆವಾರ್ ಭಾಷಣವನ್ನ ಪಠ್ಯದಲ್ಲಿ ಸೇರಿಸಿದರೆ ತಪ್ಪೇನಿದೆ ? ಅಷ್ಟಕ್ಕೂ ಕಾಂಗ್ರೆಸ್ ಗೆ ಹೆಡ್ಗೆವಾರ್ ಕಂಡರೆ ಭಯ ಯಾಕೆ ? ಎಂದು ಪ್ರಶ್ನಿಸಿದರು. ಹೆಡ್ಗೆವಾರ್ ಅವರ ಪ್ರೇರಣೆಯಿಂದಲೇ ಕೋಟ್ಯಂತರ ಜನ ದೇಶಪ್ರೇಮದ ಕೆಲಸ ಮಾಡುತ್ತಿದ್ದಾರೆ. ಅವರ ಪ್ರೇರಣೆಯಿಂದಲೇ ಕೆಲಸ ಮಾಡುತ್ತಿದ್ದೇವೆ. ಅದು ನಮ್ಮ ಬದ್ಧತೆ ಎಂದರು.
ಸಮಾಜದಲ್ಲಿದ್ದ ವಿಷಯವೊಂದನ್ನು ಕನ್ನಡಕ್ಕೆ ಸೇರಿಸಲಾಗಿದೆ. ನಾರಾಯಣಗುರು, ಭಗತ್ ಸಿಂಗ್ ವಿಚಾರವನ್ನು ಕೈಬಿಟ್ಟಿಲ್ಲ. ಹೆಡಗೆವಾರ್ ಅವರ ವಿಷಯ ಸೇರಿಸಿವುದರಿಂದ ಏನೋ ತಪ್ಪಾಗಿದೆ ಎಂದು ನನಗೆ ಅನ್ನಿಸುವುದಿಲ್ಲ. ದೇಶದ ಸ್ವಾಭಿಮಾನ, ಶೌರ್ಯದ ಬಗ್ಗೆ ಹೇಳಬೇಕು ಎನ್ನುವ ಚಿಂತನೆ ಮೊದಲಿನಿಂದಲೂ ಇತ್ತು. ಮೆಕಾಲೆ ರೂಪಿಸಿದ ಶಿಕ್ಷಣ ಪದ್ಧತಿಯ ಹಿಡಿತದಿಂದ ನಾವು ಬಿಡಿಸಿಕೊಳ್ಳಬೇಕು.
ಭಾರತೀಯ ಶಿಕ್ಷಣ ಪದ್ಧತಿ ಬರಬೇಕು. ಭಾರತದ ಮಕ್ಕಳಿಗೆ ಮೊಘಲರ ಶಿಕ್ಷಣ, ಟಿಪ್ಪುವಿನ ಶಿಕ್ಷಣ, ಔರಂಗಾಜೇಬನ ಶಿಕ್ಷಣ ಬೇಕು ಎಂಬುದು ನಮ್ಮ ವಾದವಲ್ಲ. ಭಾರತದ ಶಿಕ್ಷಣ ನಮಗೆ ಬೇಕಿದೆ. ಪಠ್ಯಪುಸ್ತಕ ಪರಿಷ್ಕರಣೆಗೆಂದು ರೂಪಿಸಿದ್ದ ತಜ್ಞರ ಸಮಿತಿ ಇದನ್ನು ಒಪ್ಪಿದೆ. ಹೀಗಾಗಿಯೇ ಪಠ್ಯ ಪುಸ್ತಕ ಪರಿಷ್ಕರಿಸಲಾಗಿದೆ ಎಂದು ಹೇಳಿದರು.
ಚಕ್ರವರ್ತಿ ಸೂಲಿಬೆಲೆ ಅವರು ತಾಯಿ ಭಾರತಿಗೆ ವಂದಿಸುವೆ ಎಂದು ಲೇಖನ ಬರೆದಿದ್ದಾರೆ. ಅದರಲ್ಲಿ ತಪ್ಪೇನಿದೆ? ತಾಯಿ ಭಾರತಿ ಎಂಬ ವಿಚಾರವನ್ನೂ ವಿರೋಧಿಸುವುದು ಯಾಕೆ? ಎಂದು ಪ್ರಶ್ನಿಸಿದರು.