ಕಾರಲ್ಲೇ ಪೆಟ್ರೋಲ್ ಸುರಿದುಕೊಂಡು ಸುಟ್ಟು ಕರಕಲಾದ ಯುವಜೋಡಿ | JANATA NEWS
ಉಡುಪಿ : ಪ್ರೇಮಿಗಳು ಹೆಗ್ಗುಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊತ್ತಾರು ಎಂಬಲ್ಲಿ ಪೆಟ್ರೋಲ್ ಸುರಿದುಕೊಂಡು ಕಾರಿನಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.
ಜ್ಯೋತಿ ಚೋಳನಾಯಕನ ಹಳ್ಳಿ ನಿವಾಸಿಯಾಗಿದ್ದು, ಯಶವಂತ್ ಮುನಿಯಪ್ಪ ಲೇಔಟ್ ನಿವಾಸಿ. ಜ್ಯೋತಿ ಒಂದು ವರ್ಷದ ಹಿಂದೆ ಬಿ.ಕಾಂ. ಮುಗಿಸಿದ್ದರು. ಯಶವಂತ್ ಪದವಿ ಮುಗಿಸಿ ಕಂಪ್ಯೂಟರ್ ಕೋರ್ಸ್ ಮಾಡುತ್ತಿದ್ದರು. ಇಂಟರ್ವ್ಯೂಗೆ ಹೋಗಿ ಬರುವುದಾಗಿ ಹೇಳಿದ್ದ ಜ್ಯೋತಿ ಮರಳಿ ಮನೆಗೆ ಬಾರದ ಕಾರಣ ಪಾಲಕರು ಮೇ 19ರಂದು ಪೊಲೀಸರಿಗೆ ದೂರು ನೀಡಿದ್ದರು. ಯಶವಂತ್ ಕೂಡ ಟ್ಯಾಲಿ ಕ್ಲಾಸ್ಗೆಂದು ಹೋಗಿದ್ದು, ಹಿಂತಿರುಗದ ಬಗ್ಗೆ ಹೆತ್ತವರು ಮೇ 21ರಂದು ದೂರು ದಾಖಲಿಸಿದ್ದರು.
ಬೆಂಗಳೂರು ಆರ್.ಟಿ.ನಗರದ 23 ವರ್ಷದ ಯಶವಂತ ಯಾದವ್, ಜ್ಯೋತಿ ಮೃತಪಟ್ಟ ಯುವ ಜೋಡಿಗಳಾಗಿದ್ದಾರೆ. ಮಂಗಳೂರಿಗೆ ಬಂದ ಈ ಜೋಡಿ ನಗರದ ಮಿಲಾಗ್ರಿಸ್ನ ಕಾರು ರೆಂಟಲ್ ಸರ್ವೀಸ್ನಲ್ಲಿ ಒಂದು ದಿನಕ್ಕೆ ಸೆಲ್ಫ್ ಡ್ರೈವ್ ಕಾರು ಬುಕ್ ಮಾಡಿದ್ದರು. ಮಂಗಳೂರಿನ ಬೀಚ್ಗಳು, ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ ಬಳಿಕ ಜೋಡಿ ಉಡುಪಿಗೆ ತೆರಳಿತ್ತು. ಮಂಗಳೂರಿನಲ್ಲಿ ಬಾಡಿಗೆ ಮನೆ ಮಾಡಿದ್ದರು ಎನ್ನಲಾಗಿದೆ.
5,000 ಪಾವತಿಸಿ ಆಧಾರ್ ಕೊಟ್ಟು ಬಾಡಿಗೆ ಕಾರು ಪಡೆದಿದ್ದರು. ಆಧಾರ್ ಕಾರ್ಡಿನ ಆಧಾರದಲ್ಲಿ ಅವರ ವಿಳಾಸವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಆತ್ಮಹತ್ಯೆಗೂ ಮುನ್ನ ಯಶವಂತ್ ಮೊಬೈಲ್ನಿಂದ ಮನೆಯವರಿಗೆ ಸಂದೇಶ ರವಾನಿಸಿದ್ದ. 'ಹೆತ್ತವರನ್ನು ಬಿಟ್ಟು ಬದುಕಲಾರೆವು. ಪ್ರೀತಿಸಿದಾಕೆಗೂ ಮೋಸ ಮಾಡಲಾರೆ. ನಮಗೆ ಬಾಡಿಗೆ ಮನೆ, ಉದ್ಯೋಗ ಸಿಕ್ಕಿದೆ. ಆದರೂ ನಾವು ಸಂತೋಷವಾಗಿಲ್ಲ. ಹಾಗಾಗಿ ಕೆಟ್ಟ ನಿರ್ಧಾರ ತೆಗೆದುಕೊಳ್ಳುತ್ತಿದ್ದೇವೆ, ಕ್ಷಮಿಸಿ' ಎಂದು ಮೆಸೇಜ್ ಕಳುಹಿಸಿದ್ದ. ಜತೆಗೆ ತಾವಿದ್ದ ಲೊಕೇಶನ್ ಮಾಹಿತಿಯನ್ನೂ ಯಶವಂತ್ ಶೇರ್ ಮಾಡಿದ್ದ. ಯುವತಿ ಜ್ಯೋತಿಯ ಹೆತ್ತವರಿಗೂ ಯಶವಂತ್ ಮೊಬೈಲ್ನಿಂದ ಮೆಸೇಜ್ ಕಳುಹಿಸಲಾಗಿತ್ತು ಎನ್ನಲಾಗಿದೆ.
ಮದುವೆಯ ಫೋಟೋಗಳನ್ನು ಮನೆಯವರಿಗೆ ಕಳುಹಿಸಿದಾಗ ವಿರೋಧ ವ್ಯಕ್ತವಾಗಿತ್ತು. ಇದರಿಂದ ಆತಂಕಕ್ಕೆ ಒಳಗಾದ ಜೋಡಿ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ.