ಸ್ಕೂಲ್ ಬಸ್ ಮತ್ತು ಬೈಕ್ ನಡುವೆ ಅಪಘಾತ: 16 ವರ್ಷದ ಬಾಲಕಿ ಸ್ಥಳದಲ್ಲೇ ಸಾವು | JANATA NEWS
ಬೆಂಗಳೂರು : ಖಾಸಗಿ ಸ್ಕೂಲ್ ಬಸ್ ಮತ್ತು ಬೈಕ್ ನಡುವೆ ನಗರದ ಬನಶಂಕರಿಯಲ್ಲಿಅಪಘಾತ ಸಂಭವಿಸಿ 16 ವರ್ಷದ ಬಾಲಕಿಯೊಬ್ಬಳು ದಾರುಣವಾಗಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಹಾರೋಹಳ್ಳಿಯ ನಿವಾಸಿ ದರ್ಶನ್ (21) ಎಂಬುವವರು ಕೀರ್ತನ ಮತ್ತು ಹರ್ಷಿತ 15 ವರ್ಷ ರವರನ್ನು ಬೈಕ್ ನಲ್ಲಿ ಹಿಂಬದಿಯಲ್ಲಿ ಕೂರಿಸಿಕೊಂಡು ಕಿತ್ತೂರು ರಾಣಿ ಚೆನ್ನಮ್ಮ ಜಂಕ್ಷನ್ ಕಡೆಯಿಂದ ಕಾಮಾಕ್ಯ ಕಡೆಗೆ ಹೋಗುತ್ತಿರುವಾಗ ಫ್ಲೈ ಓವರ್ ಮೇಲಿನಿಂದ ಬಂದ ಖಾಸಗಿ ಶಾಲಾ ಬಸ್ ಚಾಲಕ ವೈಟ್ ರಾಕ್ ಹೋಟೆಲ್ ಮುಂಭಾಗ ಬೈಕ್ ಗೆ ಗುದ್ದಿದ ಪರಿಣಾಮ, ಮೂವರೂ ವಾಹನ ಸಮೇತವಾಗಿ ರಸ್ತೆ ಮೇಲೆ ಬಿದ್ದಿದ್ದಾರೆ.
ಸ್ಕೂಲ್ ಬಸ್ಸಿನ ಚಕ್ರ ಹಿಂಬದಿಯಲ್ಲಿದ್ದ ಕೀರ್ತನ ತಲೆಯ ಮೇಲೆ ಹರಿದು, ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಹರ್ಷಿತಾ ಮತ್ತು ದರ್ಶನ್ ಗಾಯಗೊಂಡಿದ್ದಾರೆ. ಶಾಲಾ ವಾಹನ ಚಾಲಕ ಪರಾರಿಯಾಗಿದ್ದಾನೆ. ಬನಶಂಕರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.