ಕಾಪಿ ಬರಲಿ, ದೇಶದಲ್ಲಿಕಾನೂನಿದೆ, ಸತ್ಯ ಧರ್ಮ ಇದೆ. ನಾನೇನೂ ತಪ್ಪು ಮಾಡಿಲ್ಲ | JANATA NEWS
ಬೆಂಗಳೂರು : ಜಾರಿ ನಿರ್ದೇಶನಾಲಯ ನನ್ನ ವಿರುದ್ಧ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು ನನಗಿನ್ನೂ ಪ್ರತಿ ಸಿಕ್ಕಿಲ್ಲ. ಮೊದಲೆಲ್ಲ 60 ದಿನಗಳಲ್ಲಿ ತನಿಖೆ ಮುಗಿಸುವ ಪದ್ಧತಿ ಇತ್ತು. ಈಗ ಎರಡೂವರೆ ವರ್ಷ ತೆಗೆದುಕೊಂಡು ಆರೋಪಪಟ್ಟಿ ಸಲ್ಲಿಕೆ ಮಾಡಿದ್ದಾರೆ.
ಬಹಳ ದೊಡ್ಡ ತನಿಖೆ ಮಾಡಿದ್ದಾರೆ. ಅವರು ಹೊಸದಾಗಿ ಸೃಷ್ಠಿ ಮಾಡಲು ಸಾಧ್ಯವಿಲ್ಲ. ಕಾಪಿ ಬರಲಿ, ಕಾನೂನಿದೆ ದೇಶದಲ್ಲಿ. ಸತ್ಯ ಧರ್ಮ ಇದೆ. ನಾನೇನೂ ತಪ್ಪು ಮಾಡಿಲ್ಲ ಅನ್ನುವುದು ರಾಜ್ಯಕ್ಕೆ, ದೇಶಕ್ಕೆ ಗೊತ್ತಿದೆ ಎಂದರು.
ರಾಜಕೀಯವಾಗಿ ಎಲ್ಲಾ ಅಸ್ತ್ರ ಉಪಯೋಗಿಸುತ್ತಿದ್ದಾರೆ. ಅವರು ನಮಗೆ ಮುಂದೆ ನೋಟಿಸ್ ಕೊಡುತ್ತಾರೆ. ಆಗ ಖಂಡಿತ ಪರಿಶೀಲಿಸುತ್ತೇವೆ. ನಾವು ಕಾನೂನು ಪರಿಪಾಲನೆ ಮಾಡುವವರು ಎಂದರು.
English summary :Come to copy, there is a country, there is a true religion. I have done nothing wrong