ಕಾಶ್ಮೀರ ಕಣಿವೆಯಲ್ಲಿ ಮತ್ತೆ ಇಸ್ಲಾಮಿಕ್ ಭಯೋತ್ಪಾದಕರ ಕ್ರೌರ್ಯ : ಶಾಲೆಯೊಳಗೆ ಹಿಂದೂ ಶಿಕ್ಷಕಿ ಹತ್ಯೆ | JANATA NEWS
ಶ್ರೀನಗರ : ಕಾಶ್ಮೀರ ಕಣಿವೆಯಲ್ಲಿ ಹಿಂದೂಗಳನ್ನು ಮತ್ತೊಮ್ಮೆ ಇಸ್ಲಾಮಿಕ್ ಭಯೋತ್ಪಾದಕರು ಗುರಿಯಾಗಿಸಿಕೊಂಡು ಹತ್ಯೆ ಮಾಡಿದ್ದಾರೆ.
ಅಮರನಾಥ ಯಾತ್ರೆಗೂ ಮುನ್ನ ಕಾಶ್ಮೀರ ಕಣಿವೆಯಲ್ಲಿ ಇಸ್ಲಾಮಿಕ್ ಭಯೋತ್ಪಾದಕರು ಹಿಂದೂ ಮಹಿಳೆಯನ್ನು ಗುರಿಯಾಗಿಸಿದ್ದಾರೆ.
ದಕ್ಷಿಣ ಕಾಶ್ಮೀರದ ಕುಲ್ಗಾಮ್ನ ಚವಲ್ಗಾಮ್ನಲ್ಲಿ ಸರ್ಕಾರಿ ಶಿಕ್ಷಕಿ ರಜನಿ ಬಾಲಾ ಅವರನ್ನು ಭಯೋತ್ಪಾದಕರು ಹತ್ಯೆ ಮಾಡಿದ್ದಾರೆ. ಅವರು ಜಮ್ಮುವಿನ ಸಾಂಬಾ ನಿವಾಸಿಯಾಗಿದ್ದರು.
ಕಾಶ್ಮೀರಿ ಹಿಂದೂ ರಾಹುಲ್ ಭಟ್ ಹತ್ಯೆಯಾದ ಮೂರು ವಾರಗಳ ನಂತರ ಕಾಶ್ಮೀರದಲ್ಲಿ ಮತ್ತೊಂದು ಹಿಂದೂ ಹತ್ಯೆಯಾಗಿದೆ.
ಮೂಲಗಳ ಪ್ರಕಾರ, ಮಂಗಳವಾರ ಬೆಳಗ್ಗೆ ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಗೋಪಾಲ್ಪೋರಾ ಪ್ರದೇಶದ ಶಾಲೆಯೊಳಗೆ ಜಮ್ಮು ಜಿಲ್ಲೆಯ ಸಾಂಬಾದ ಶಿಕ್ಷಕನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮೃತ ಶಿಕ್ಷಕಿ ಎಂಎ, ಎಂಫಿಲ್, ಬಿಎಡ್. ಪದವಿಧರೆಯಾಗಿದ್ದರು.