ಲಾಡ್ಜ್ನಲ್ಲಿ ಮಹಿಳೆ ಶವ ಪತ್ತೆ, ಪ್ರಿಯಕರನಿಂದಲೇ ಪ್ರಿಯತಮೆಯ ಕೊಲೆಯ ಶಂಕೆ! | JANATA NEWS
ಬೆಂಗಳೂರು : ಲಾಡ್ಜ್ವೊಂದರಲ್ಲಿ ಪ್ರಿಯಕರನಿಂದಲೇ ಪ್ರಿಯತಮೆಯ ಉಸಿರುಗಟ್ಟಿಸಿ ಕೊಲೆ ಮಾಡಿರುವಂತಹ ಘಟನೆ ಯಶವಂತಪುರದಲ್ಲಿ ನಡೆದಿದೆ.
ಒಡಿಶಾ ಮೂಲದ ದೀಪಾ ಪದನ್(37) ಕೊಲೆಯಾದ ಮಹಿಳೆ.ಆಕೆಯ ಪ್ರಿಯಕರ ಅನ್ಮಲ್ ರತನ್ ಕಂದರ್ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ದೀಪಾ ಪದನ್ ಹಾಗೂ ಅನ್ಮಲ್ ರತನ್ ಕಂದರ್ ಬೇರೆ ಬೇರೆಯವರ ಜೊತೆ ಮದುವೆಯಾಗಿದ್ದರೂ, ಇವರಿಬ್ಬರ ನಡುವೆ ಹಲವು ತಿಂಗಳಿನಿಂದ ಸ್ನೇಹ ಸಂಬಂಧವಿತ್ತು ಎನ್ನಲಾಗಿದೆ.
ಆದರೆ ದೀಪಾ ಬದನ್ ಮತ್ತೊಬ್ಬನ ಜೊತೆ ಕೂಡ ಸ್ನೇಹ ಬೆಳೆಸಿದ್ದು, ಈ ವಿಚಾರ ಅನ್ಮರ್ಗೆ ತಿಳಿದಿದೆ. ಈ ಹಿನ್ನೆಲೆ ಒರಿಸ್ಸಾದಿಂದ ನಗರಕ್ಕೆ ಔಟಿಂಗ್ ಎಂದು ಕರೆತಂದು ದೀಪಾ ಪದನ್ ಕೊಲೆ ಮಾಡಿ ಅನ್ಮಲ್ ರತನ್ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.