ಟೆಸ್ಟ್ ಡ್ರೈವ್ ಹೋಗಿ ಬರೋದಾಗಿ ಹೇಳಿ ವಂಚಿಸುತ್ತಿದ್ದವನ ಬಂಧನ | JANATA NEWS
ಬೆಂಗಳೂರು : ಓಎಲ್ಎಕ್ಸ್ ನಲ್ಲಿ ವಾಹನ ಖರೀದಿ ನೆಪದಲ್ಲಿ ವಂಚಿಸಿದ ಆರೋಪಿಯನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ.
ಮಂಜುನಾಥ್ ಬಂಧಿತ. ಕನಕಪುರ ಮೂಲದ ಮಂಜುನಾಥ್ ಸೆಕ್ಯೂರಿಟಿ ಗಾರ್ಡ್ ಆಗಿದ್ದು, ನಿರುದ್ಯೋಗಿಗಳನ್ನು ಸಂಪರ್ಕಿಸಿ ಕೆಲಸ ಕೊಡಿಸುವುದಾಗಿ ಹೇಳಿ ದಾಖಲಾತಿಗಳನ್ನು ಪಡೆದುಕೊಳ್ಳುತ್ತಿದ್ದ. ಅದೇ ದಾಖಲಾತಿಗಳನ್ನು ಬಳಸಿ ಸಿಮ್ ಕಾರ್ಡ್ ಖರೀದಿ ಮಾಡುತ್ತಿದ್ದನಂತೆ.
ಬಳಿಕ ಅವರ ಸಿಮ್ ಕಾರ್ಡ್ಗಳನ್ನೇ ಪಡೆದು ಓಎಲ್ಎಕ್ಸ್ ನಲ್ಲಿ ಜಾಹೀರಾತು ನೀಡಿದವರನ್ನು ಸಂಪರ್ಕಿಸುತ್ತಿದ್ದ. ಬಳಿಕ ಬೈಕನ್ನ ಟೆಸ್ಟ್ ಡ್ರೈವ್ ಹೋಗಿ ಬರ್ತೀನಿ ಎಂದು ಹೇಳಿ ಎಗರಿಸಿ ಎಸ್ಕೇಪ್ ಆಗುತ್ತಿದ್ದ. ಆರೋಪಿ ಬಂಧನದಿಂದ ಒಟ್ಟು 9 ಠಾಣೆಯಲ್ಲಿ ವಂಚನೆ ಪ್ರಕರಣಗಳಿರುವುದು ಬೆಳಕಿಗೆ ಬಂದಿದೆ.
3 ಕಾರು, ಒಂದು ದ್ವಿಚಕ್ರ ವಾಹನ, ಕೃತ್ಯಕ್ಕೆ ಬಳಸ್ತಿದ್ದ ಐದು ಫೋನ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.