ಪತ್ನಿಯನ್ನು ಕೊಂದು, ಮಗಳಿಗೂ ಚಾಕು ಇರಿದು ಪೊಲೀಸ್ ರಿಗೆ ಕರೆ ಮಾಡಿದ ಪತಿ! | JANATA NEWS
ಬೆಂಗಳೂರು : ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಬಳಿಕ ತನ್ನ 13 ವರ್ಷದ ಮಗಳನ್ನು ಕೂಡ ಕೊಲ್ಲಲು ಯತ್ನಿಸಿ ಯಶವಂತಪುರ ಪೊಲೀಸ್ ಠಾಣೆಗೆ ಕರೆಮಾಡಿ ಮಾಹಿತಿ ನೀಡಿರುವ ಘಟನೆ ಬೆಂಗಳೂರು ನಗರದಲ್ಲಿ ನಡೆದಿದೆ.
ಅನುಸೂಯ ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಧನೇಂದ್ರ ಎಂಬಾತ ಪತಿ.
ಧನೇಂದ್ರ 1.20 ಲಕ್ಷ ಸಾಲ ಮಾಡಿಕೊಂಡಿದ್ದ. ಈ ಸಾಲವನ್ನು ತೀರಿಸುವಂತೆ ಧನೇಂದ್ರ ಜೊತೆ ಪತ್ನಿ ಅನಸೂಯ ಗಲಾಟೆ ಮಾಡ್ತಿದ್ದಳು. ಬೆಳಗಿನ ಜಾವ 3 ಗಂಟೆ ಸಂದರ್ಭದಲ್ಲಿ ಮಲಗಿದ್ದ ಅನಸೂಯಾ ಮೇಲೆ ಧನೇಂದ್ರ ಚಾಕುವಿನಿಂದ ಇರಿದು ಕೊಲೆಗೈದಿದ್ದಾನೆ. ನಂತರ ಮಗಳಿಗೆ ಚಾಕು ಚುಚ್ಚಿ ಕೊಲೆ ಮಾಡೋಕೆ ಯತ್ನಿಸಿದ್ದ. ಈ ವೇಳೆ ಚಾಕು ಇರಿತದಿಂದ ಮಗಳು ಪ್ರಜ್ಞೆತಪ್ಪಿ ಕೆಳಗೆ ಬಿದ್ದಿದ್ದಾಳೆ.
ಬಳಿಕ ತಾನೂ ಆತ್ಮಹತ್ಯೆಗೆ ಮುಂದಾಗಿದ್ದ. ಆದರೆ ಸಾಯಲು ಭಯವಾಗಿದೆ. ಹೀಗಾಗಿ ರಾತ್ರಿಯಿಡೀ ಪತ್ನಿ ಮೃತದೇಹದ ಜೊತೆ ಕಳೆದಿದ್ದಾನೆ.
ನಂತರ ಬೆಳಗ್ಗೆ ಮಗುವಿಗೆ ಪ್ರಜ್ಞೆ ಬಂದಿದೆ. ಮಗುವನ್ನ ನೋಡಿ ಮತ್ತಷ್ಟು ಗಾಬರಿಯಾದ ಧನೇಂದ್ರ ಮತ್ತೆ ಕೊಲೆ ಮಾಡಲು ಹೋಗಿದ್ದಾನೆ. ಆಗ ಮಗು ಜೋರಾಗಿ ಅಳಲು ಶುರುಮಾಡಿದೆ. ಹೆದರಿದ ಆರೋಪಿ ಧನೇಂದ್ರ ಪೊಲೀಸ್ ಕಂಟ್ರೋಲ್ ರೂಮ್ಗೆ ಕರೆ ಮಾಡಿದ್ದಾನೆ.