ಪ್ರವಾಸಕ್ಕೆ ಬಂದಿದ್ದ ನಾಲ್ವರು ನೀರುಪಾಲು, ಇಬ್ಬರ ಶವ ಪತ್ತೆ | JANATA NEWS
ಕುಮಟಾ : ವಾಸಕ್ಕೆ ಬಂದು ಈಜಲು ತೆರೆಳಿದ್ದ ನಾಲ್ವರು ವಿದ್ಯಾರ್ಥಿಗಳು ನೀರುಪಾಲಾದ ಘಟನೆ ಕಾಗಲ್ ಕಡಲ ತೀರದಲ್ಲಿ ಇಂದು ನಡೆದಿದೆ.
ಬೆಂಗಳೂರಿನಿಂದ ಕುಮುಟಾ ಪ್ರವಾಸಕ್ಕೆ 87 ವಿದ್ಯಾರ್ಥಿಗಳ ತಂಡದ ಬಂದಿದ್ದರು. ಈ ಸಂದರ್ಭದಲ್ಲಿ ಸಮುದ್ರದಲ್ಲಿ ಈಜಲು ಹೋಗಿ ನಾಲ್ವರು ನೀರುಪಾಲು ಆದ ಘಟನೆ ಬೆಳಕಿಗೆ ಬಂದಿದೆ. ಇವರಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದ್ದು, ಮತ್ತಿಬ್ಬರಿಗಾಗಿ ಮುಂದುವರಿದ ಶೋಧ ಕಾರ್ಯಾಚರಣೆ ನಡೆಯುತ್ತಿದೆ
ಬೆಂಗಳೂರು ನಿವಾಸಿಗಳಾದ ಅರ್ಜುನ್,ಚೈತ್ರಶ್ರೀ, ತೇಜಸ್ ಡಿ,ಕಿರಣ್ ಕುಮಾರ್ ಸಾವನ್ನಪ್ಪಿದ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ.
ಅರ್ಜುನ್ ಹಾಗೂ ಚೈತ್ರಶ್ರೀ ಮೃತ ದೇಹ ಪತ್ತೆಯಾಗಿದ್ದು, ತೇಜಸ್ ಡಿ., ಕಿರಣ್ ಕುಮಾರ್ ಸಮುದ್ರದಲ್ಲಿ ಕಣ್ಮರೆಯಾಗಿದ್ದಾರೆ. ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
English summary :Four of the tourists were fall in sea