ಇವರು ನಮ್ಮ ಪಕ್ಷದ ಕಾರ್ಯಕರ್ತ, ಯಾವುದೇ ಕಾರಣಕ್ಕೂ ಹಿಡಿಯಬಾರದು: ಶಾಸಕರ ಶಿಫಾರಸ್ಸು ಪತ್ರ ವೈರಲ್ | JANATA NEWS
ಬೆಂಗಳೂರು : ಶಾಸಕರ ತಮ್ಮ ಕ್ಷೇತ್ರದ ವಾಹನ ಸವಾರರೊಬ್ಬರಿಗೆ ಈ ವಾಹನ ನನ್ನ ಮತ ಕ್ಷೇತ್ರದ್ದು, ಹಿಡಿಯಬಾರದು ಎಂಬುದಾಗಿ ಶಿಫಾರಸ್ಸು ಪತ್ರ ಕೊಟ್ಟಿರೋದು ಬೆಳಕಿಗೆ ಬಂದಿದೆ.
ಗದಗ ಜಿಲ್ಲೆಯ ಶಿರಹಟ್ಟಿ ಮತಕ್ಷೇತ್ರದ ಶಾಸಕ ರಾಮಪ್ಪ ಎಸ್ ಲಮಾಣಿಯವರ ಶಿಫಾರಸ್ಸು ಪತ್ರವೇ ಹೀಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವಂತ ಪತ್ರವಾಗಿದೆ.
ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದು, ಇದು ಅಧಿಕಾರದ ದುರ್ಬಳಕೆ, ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ, ಶಾಸಕರ ಕಡೆಯವರು ಅಂದ ಮಾತ್ರಕ್ಕೆ ಸಾರಿಗೆ ನಿಯಮ ಅನ್ವಯಿಸುವುದಿಲ್ಲವೇ? ಇದ್ಹೇನು ಸರ್ವಾಧಿಕಾರಿ ಧೋರಣೆಯೇ ಎಂದು ಪ್ರಶ್ನಿಸುತ್ತಿದ್ದಾರೆ.
ವೈರಲ್ ಆಗಿರುವಂತ ಪತ್ರದಲ್ಲಿ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬೆಳಗಟ್ಟಿಯ ಜಿ ಬಸವಾರಜ ಎನ್ನುವವರು ನನ್ನ ಮತಕ್ಷೇತ್ರ ಶಿರಹಟ್ಟಿಯ ವಿಧಾನಸಭಾ ವ್ಯಾಪ್ತಿಗೆ ಒಳಪಟ್ಟಿರುತ್ತಾರೆ. ನಮ್ಮ ಪಕ್ಷದ ಕಾರ್ಯಕರ್ತರೂ ಆಗಿರುತ್ತಾರೆ. ನನಗೆ ಚಿರಪರಿಚಿತರಾಗಿದ್ದು, ಅವರ ಬೊಲೆರೋ ವಾಹನ AP-39, V-3517 ಅನ್ನು ಹಿಡಿಯಬಾರದು ಮತ್ತು ಯಾವುದೇ ಕಾರಣಕ್ಕೂ ತೊಂದರೆ ಕೊಡಬಾರದೆಂದು ವಿನಂತಿಸಿದ್ದಾರೆ.