ಅನೈತಿಕ ಸಂಬಂಧ ಬಗ್ಗೆ ಶಂಕಿಸಿ ಹೆಂಡತಿಯನ್ನ ಮಚ್ಚಿನಿಂದ ಕೊಲೆ! | JANATA NEWS
ಬೆಂಗಳೂರು : ಅನೈತಿಕ ಸಂಬಂಧ ಬಗ್ಗೆ ಶಂಕಿಸಿ ಹೆಂಡತಿಯನ್ನ ಮಚ್ಚಿನಿಂದ ಕೊಲೆಗೈದ ಘಟನೆ ಆನೇಕಲ್ ಪಟ್ಟಣದಲ್ಲಿ ನಡೆದಿದೆ.
ಪ್ರೇಮ (25) ಕೊಲೆಯಾದ ಮಹಿಳೆಯಾಗಿದ್ದು, ಆರೋಪಿಯನ್ನು ವೆಂಕಟೇಶಾಚಾರಿ ಎಂದು ಗುರುತಿಸಲಾಗಿದೆ. 9 ವರ್ಷದ ಹಿಂದೆ ಪ್ರೇಮ ಮತ್ತು ವೆಂಕಟೇಶಾಚಾರಿ ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ 7 ವರ್ಷದ ಹೆಣ್ಣು ಮಗುವಿತ್ತು.
ಕಳೆದ ಎರೆಡು ವರ್ಷಗಳ ಹಿಂದೆ ಆನೇಕಲ್ ಪಟ್ಟಣದ ಹೂವಾಡಿಗರ ಬೀದಿಯ ಗೋವಿಂದರಾಜು ಮನೆಯಲ್ಲಿ ದಂಪತಿಗಳು ಬಾಡಿಗೆಗಿದ್ದರು.
ಶನಿವಾರ ಬೆಳಿಗ್ಗೆ ಇದೇ ವಿಚಾರವಾಗಿ ಇಬ್ಬರ ನಡುವೆ ಮತ್ತೇ ಜಗಳ ಆರಂಭವಾಗಿ ತಾರಕಕ್ಕೇರಿತ್ತು. ಆಗ ರಮೇಶ್ ಮಚ್ಚಿನಿಂದ ಪತ್ನಿಯ ಕತ್ತು ಹಾಗೂ ಕೈ ಭಾಗಕ್ಕೆ ಮಚ್ಚಿನಿಂದ ಹೊಡೆದಿದ್ದಾನೆ. ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಘಟನಾ ಸ್ಥಳಕ್ಕೆ ಆನೇಕಲ್ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.