ಮನೆಯಲ್ಲಿ ಜಿರಳೆ, ತಿಗಣೆ ಕಾಟವೆಂದು ಔಷಧ ಸಿಂಪಡಣೆ, ಬಾಲಕಿ ಸಾವು, ಪಾಲಕರು ಅಸ್ವಸ್ಥ | JANATA NEWS
ಬೆಂಗಳೂರು : ಜಿರಳೆ ಔಷಧದಿಂದಾಗಿ ಆರು ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ವಸಂತನಗರದ ಮಾರಮ್ಮ ದೇವಸ್ಥಾನನದ ಬಳಿ ಮನೆಯೊಂದರಲ್ಲಿ ತಡರಾತ್ರಿ ನಡೆದಿದೆ.
ಅಹನಾ (6) ಮೃತ ಬಾಲಕಿ. ಬೆಂಗಳೂರಿನ ವಸಂತನಗರದ ಐದನೇ ಅಡ್ಡರಸ್ತೆ ಬಳಿ ಇರುವ ಶಿವಪ್ರಸಾದ್ ಎಂಬವರ ಮಾಲೀಕತ್ವದ ಮನೆಯಲ್ಲಿ ಈ ಪ್ರಕರಣ ನಡೆದಿದೆ.
ಮನೆಯಲ್ಲಿ ಜಿರಳೆ ಹಾಗೂ ತಿಗಣೆ ಕಾಟ ಜಾಸ್ತಿ ಆದ್ದರಿಂದ ಒಂದು ವಾರ ಊರಿಗೆ ಹೋಗಿ ಬನ್ನಿ ಮನೆಗೆ ಔಷಧಿ ಹೊಡೆಸ್ತಿನಿ ಅಂತ ಮಾಲೀಕ ತಿಳಿಸಿದ್ದಾರೆ. ಆದರಂತೆ ವಿನೋದ್ ಹೆಂಡತಿ ಮಗಳ ಜೊತೆ ಊರಿಗೆ ಹೋಗಿದ್ದಾರೆ. ಮಾಲೀಕ ಮನೆಗೆಲ್ಲ ಜಿರಳೆ ಔಷಧಿ ಹೊಡೆಸಿ ಬಾಗಿಲು ಬಂದ್ ಮಾಡಿದ್ದಾನೆ. ಆದರೆ, ಎಂಟು ದಿನಕ್ಕೆ ವಾಪಸ್ಸು ಬರುತ್ತೇವೆ ಅಂತ ಹೋದ ವಿನೋದ್ ಹಾಗೂ ಕುಟುಂಬ ನಾಲ್ಕು ದಿನಕ್ಕೆ ಮನೆ ಮಾಲೀಕನಿಗೆ ತಿಳಿಸದೆ ಮನೆಗೆ ಬಂದಿದ್ದಾರೆ.
ಪರಿಣಾಮ ಮೂವರಿಗೂ ಉಸಿರಾಟದ ಸಮಸ್ಯೆ ಉಲ್ಬಣಿಸಿತ್ತು. ಪಾಲಕರು ಕೂಡ ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಕೂಡಲೇ ಬಾಲಕಿಯನ್ನ ಆಸ್ಪತ್ರೆಗೆ ಸಾಗಿಸಿದರು ಬದುಕುಳಿದಿಲ್ಲ.
ಈ ದುರ್ಘಟನೆ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.