ಪಾಕಿಸ್ತಾನದಂತೆಯೇ ಅದೇ ಸಮಯದಲ್ಲಿ ಸ್ವಾತಂತ್ರ್ಯ ಪಡೆದ ಭಾರತಕ್ಕೀಗಿದೆ ಸ್ವತಂತ್ರ ವಿದೇಶಾಂಗ ನೀತಿ - ಪಾಕಿಸ್ತಾನ ಮಾಜಿ ಪ್ರಧಾನಿ | JANATA NEWS
ಇಸ್ಲಾಮಾಬಾದ್ : ಭಾರತದ ವಿದೇಶಾಂಗ ನೀತಿ ಮತ್ತೊಬ್ಬ ವಿದೇಶಿ ನಾಯಕರ ಹೊಗಳಿಕೆ ಪಾತ್ರವಾಗಿದೆ ಮತ್ತು ವಿಶೇಷವೆಂದರೆ ನೆರೆಯ ರಾಷ್ಟ್ರ ಪಾಕಿಸ್ತಾನದ ಮಾಜಿ ಪ್ರಧಾನಿ ರಷ್ಯಾ-ಉಕ್ರೇನ್ ಯುದ್ಧದ ಸಂದರ್ಭದಿಂದಲೂ ಭಾರತೀಯ "ಸ್ವತಂತ್ರ ವಿದೇಶಾಂಗ ನೀತಿ" ಯನ್ನು ಹೊಗಳುತ್ತಿದ್ದಾರೆ, ಆದರೆ ಈ ಬಾರಿ ಅವರು ಒಂದು ಹೆಜ್ಜೆ ಮುಂದಕ್ಕೆ ಹೋಗಿ ಭಾರತದ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಅವರ ವಿಡಿಯೋ ಒಂದನ್ನು ಬೃಹತ್ ಸಮಾವೇಶದ ಮುಂದೆ ತೋರಿಸಿ ಹೋಗಲಿದ್ದಾರೆ.
ಪಾಕಿಸ್ತಾನದ ಉಚ್ಛಾಟಿತ ಪ್ರಧಾನಿ ಇಮ್ರಾನ್ ಖಾನ್ ಮತ್ತೊಮ್ಮೆ "ಸ್ವತಂತ್ರ ವಿದೇಶಾಂಗ ನೀತಿ" ಅನುಸರಿಸುವುದಕ್ಕಾಗಿ ಭಾರತವನ್ನು ಶ್ಲಾಘಿಸುವುದನ್ನು ಮುಂದುವರೆಸಿದ್ದಾರೆ ಮತ್ತು ರಷ್ಯಾದಿಂದ ಅಗ್ಗದ ತೈಲವನ್ನು ಖರೀದಿಸುವ ಅಮೇರಿಕ(ಯುಎಸ್) ಒತ್ತಡಕ್ಕೆ ಮಣಿಯದೇ ದೃಢವಾಗಿ ನಿಂತಿದ್ದಕ್ಕಾಗಿ ಅವರು ಶ್ಲಾಘಿಸಿದ್ದಾರೆ.
ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಖಾನ್, ಭಾರತವು ಯುಎಸ್ ಕಾರ್ಯತಂತ್ರದ ಮಿತ್ರರಾಷ್ಟ್ರವಾಗಿದೆ, ನಾವು ಯುಎಸ್ ಜೊತೆ ಯಾವುದೇ ಮಿತ್ರರನ್ನು ಹೊಂದಿಲ್ಲ. ಇನ್ನು, ರಷ್ಯಾದಿಂದ ತೈಲವನ್ನು ಖರೀದಿಸಬೇಡಿ ಎಂದು ಭಾರತವನ್ನು ಯುಎಸ್ ಕೇಳಿದಾಗ, ಭಾರತ ನಿರಾಕರಿಸಿತು ಮತ್ತು ಭಾರತವು ತನ್ನ ಜನರ ಹಿತಾಸಕ್ತಿಯಿಂದಾಗಿ ರಷ್ಯಾದಿಂದ ತೈಲವನ್ನು ಖರೀದಿಸಿತು, ಎಂದು ಭಾರತದ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ವೀಡಿಯೊವನ್ನು ಪ್ಲೇ ಮಾಡಿದ ನಂತರ ಹೇಳಿದರು. ಶೆಹಬಾಜ್ ಷರೀಫ್ ನೇತೃತ್ವದ ಪ್ರಸ್ತುತ ಆಡಳಿತವು ವಾಷಿಂಗ್ಟನ್ನ ಬೆಂಬಲವಿಲ್ಲದೆ ಪಾಕಿಸ್ತಾನವು ಬದುಕಲು ಸಾಧ್ಯವಿಲ್ಲ ಎಂದು ಹೇಳಿರುವುದನ್ನು ಇಮ್ರಾನ್ ಖಾನ್ ಈ ಸಂದರ್ಭದಲ್ಲಿ ತರಾಟೆ ತೆಗೆದುಕೊಂಡಿದ್ದಾರೆ.
"ಪಾಕಿಸ್ತಾನದಂತೆಯೇ ಅದೇ ಸಮಯದಲ್ಲಿ ಸ್ವಾತಂತ್ರ್ಯ ಪಡೆದ ಭಾರತ ಮತ್ತು ನವದೆಹಲಿಯು ದೃಢವಾದ ನಿಲುವನ್ನು ತೆಗೆದುಕೊಂಡು ತನ್ನ ಜನರ ಅಗತ್ಯಕ್ಕೆ ಅನುಗುಣವಾಗಿ ತಮ್ಮ ವಿದೇಶಾಂಗ ನೀತಿಯನ್ನು ಮಾಡಲು ಸಾಧ್ಯವಾದರೆ, ಅವರು (ಪ್ರಧಾನಿ ಶೆಹಬಾಜ್ ಷರೀಫ್ ಸರ್ಕಾರ) ರೇಖೆಯನ್ನು(ಇತಿಮಿತಿ) ಎಳೆಯುವವರು ಯಾರು?, ಎಂದು ಖಾನ್ ರ್ಯಾಲಿಯಲ್ಲಿ ಹೇಳಿದರು.