ಬೈಕ್ ಮೇಲೆ ಹೊರಟಿದ್ದ ವ್ಯಕ್ತಿಯ ರುಂಡ ಕಡಿದು ಭೀಕರ ಹತ್ಯೆ! | JANATA NEWS
ಬೆಳಗಾವಿ : ಬೈಕ್ ನಲ್ಲಿ ತೆರಳುತ್ತಿದ್ದಂತ ವ್ಯಕ್ತಿಯನ್ನು ಅಡ್ಡಗಟ್ಟಿರುವಂತ ದುಷ್ಕರ್ಮಿಗಳು, ರುಂಡವನ್ನು ಕತ್ತರಿಸಿರುವಂತ ಭೀಕರ ಘಟನೆ ಬೆಳಗಾವಿಯ ತಾರಿಹಾಳ್ ಕ್ರಾಸ್ನ ಜೈನ ಬಸದಿ ಬಳಿಯಲ್ಲಿ ನಡೆದಿದೆ.
ತಾರಿಹಾಳ ಕ್ರಾಸ್ ಬಳಿ ಮುನವಳ್ಳಿ ನಿವಾಸಿ ಗದಗಯ್ಯ ಹಿರೇಮಠ (40) ಎಂಬುವರೆ ಕೊಲೆಯಾದವರು. ಬೈಕ್ ಮೇಲೆ ರುಂಡ ಕತ್ತರಿಸಿದಂತ ಮೃತ ದೇಹ ಬಿದ್ದಿದ್ದು, ಇದನ್ನು ನೋಡಿ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.
ಕೊಂಡಸಕೊಪ್ಪ ಗ್ರಾಮದಿಂದ ಹೊರಟಿದ್ದ ಗದಗಯ್ಯನ ದ್ವಿಚಕ್ರ ವಾಹನ ನಿಲ್ಲಿಸಿದ ಹಂತಕರು ಏಕಾಏಕಿ ಮಾರಕಾಸ್ತ್ರದಿಂದ ಹೊಡೆದಿದ್ದಾರೆ. ರುಂಡ ಚೆಂಡಾಡಿ ಭೀಕರವಾಗಿ ಹತ್ಯೆ ಮಾಡಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಹಿರೇಬಾಗೇವಾಡಿ ಠಾಣೆಯ ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸಿ, ಈ ಸಂಬಂಧ ಪ್ರಕರಣವನ್ನು ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.