ಸರ್ಕಾರದ ಯೋಜನೆಗಳು ಮತ್ತು ಸಾಧನೆಗಳನ್ನು ಜನತೆ ಮುಂದಿಡಲು ಜನಸ್ಪಂದನೆ: ಸಿಎಂ ಬೊಮ್ಮಾಯಿ | JANATA NEWS
ಬೆಂಗಳೂರು : ಬಿಜೆಪಿಯ ಸಾಧನೆಯನ್ನು ಬಿಂಬಿಸಲು ಬೃಹತ್ ಸಮಾವೇಶವನ್ನು ಜನಸ್ಪಂದನ ಅನ್ನೋ ಹೆಸರಿನಲ್ಲಿ ದೊಡ್ಡಬಳ್ಳಾಪುದಲ್ಲಿ ಆಯೋಜಿಸಲಾಗಿದೆ..
ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಮತ್ತು ಸ್ಮೃತಿ ಇರಾನಿ ಆಗಿಸುತ್ತಿದ್ದರು ರಾಜ್ಯದ ಪ್ರಮುಖ ನಾಯಕರು ವೇದಿಕೆ ಮೇಲಿರಲಿದ್ದಾರೆ. ಸರ್ಕಾರದ ಯೋಜನೆಗಳು ಮತ್ತು ಸಾಧನೆಗಳನ್ನು ರಾಜ್ಯದ ಜನತೆ ಮುಂದಿಡಲು ಜನಸ್ಪಂದನೆ ಜನೋತ್ಸವ ಸಮಾವೇಶ ಇಂದು ಹಮ್ಮಿಕೊಂಡಿದ್ದೇವೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ದಾಖಲೆ ಮಟ್ಟದಲ್ಲಿ ವಿಜಯ ಸಾಧಿಸಲಿದೆ. ಇದರ ಪೂರ್ವಭಾವಿಯಾಗಿ ಈ ಸಾಧನಾ ಸಮಾವೇಶ ಎಂದು ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದರು.
ದೊಡ್ಡಬಳ್ಳಾಪುರದಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಯುತ್ತಿದೆ. ಸುಮಾರು ಎರಡು ಲಕ್ಷಕ್ಕೂ ಅಧಿಕ ಜನ ಸೇರುವ ಸಾಧ್ಯತೆ ಇದೆ. ಆ ಭಾಗದಲ್ಲಿ ಉತ್ತಮವಾಗಿ ಪಕ್ಷ ಸಂಘಟನೆ ಆಗಿದೆ ಎಂದರು. ಈ ಹಿಂದೆ ಎರಡು ಬಾರಿ ಜನಸ್ಪಂದನ ಸಮಾವೇಶ ರದ್ದಾಗಿತ್ತು.
ಈಗಾಗಲೇ ಜನರಿಗೆ ಹಲವು ವಿಶೇಷ ಯೋಜನೆ ನೀಡಿದ್ದೇವೆ. ಇಂದು ಯೋಜನೆಗಳ ಪ್ರಗತಿ ಮತ್ತು ಎಷ್ಟು ಜನರಿಗೆ ತಲುಪಿವೆ ಅನ್ನೋದರ ಬಗ್ಗೆ ಮಾಹಿತಿ ನೀಡುತ್ತೇವೆ ಎಂದು ಬೊಮ್ಮಾಯಿ ತಿಳಿಸಿದರು.