ಸ್ನೇಹಿತರ ಜೊತೆ ಈಜಲು ಹೋಗಿದ್ದ ಮೆಡಿಕಲ್ ಕಾಲೇಜು ವೈದ್ಯ ನಾಪತ್ತೆ | JANATA NEWS
ರಾಮನಗರ : ಸ್ನೇಹಿತರ ಜೊತೆ ಈಜಲು ಹೋಗಿದ್ದ ವೈದ್ಯ ನಾಪತ್ತೆಯಾಗಿರುವ ಘಟನೆ ಕನಕಪುರದ ಮಾವತ್ತೂರು ಕೆರೆಯಲ್ಲಿ ನಡೆದಿದೆ.
ಸಚಿನ್ ಕುಮಾರ್(26) ನಾಪತ್ತೆಯಾದ ವೈದ್ಯ. ನಿನ್ನೆ ಸಂಜೆ ಸ್ನೇಹಿತರ ಜೊತೆ ಕೆರೆ ನೋಡಲು ಹೋಗಿದ್ದ ಸಚಿನ್, ಕೆರೆಯಲ್ಲಿ ಈಜಲು ಹೋಗಿ ಏಕಾಏಕಿ ನಾಪತ್ತೆಯಾಗಿದ್ದಾರೆ. ಬಾದಾಮಿ ಮೂಲದ ಸಚಿನ್ ಕುಮಾರ್ಗಾಗಿ ಹುಡುಕಾಟ ನಡೆಯುತ್ತಿದೆ.
ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ, ಕೆರೆಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಕನಕಪುರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.
English summary :A medical college doctor who had gone swimming with his friends went missing