ಹೋಟೆಲ್ ಎದುರು ನಿಂತಿದ್ದವರಿಗೆ ಕ್ಯಾಂಟರ್ ಡಿಕ್ಕಿ, ಗರ್ಭಿಣಿ ಸೇರಿ ಮೂವರ ಸಾವು | JANATA NEWS
ಚಿಕ್ಕಬಳ್ಳಾಪುರ : ಕ್ಯಾಂಟರ್ವೊಂದು ಚಾಲಕನ ನಿಯಂತ್ರಣ ತಪ್ಪಿ ಬೈಕ್ಗೆ ಡಿಕ್ಕಿ ಹೊಡೆದು ಬಳಿಕ ಹೋಟೆಲ್ ನತ್ತ ನುಗ್ಗಿರೋ ಘಟನೆ ರಾಮದೇವರಗುಡಿ ರಾಷ್ಟ್ರೀಯ ಹೆದ್ದಾರಿ 44 ಬಳಿ ಪ್ರಣವ್ ಹೋಟೆಲ್ ಮುಂಭಾಗದಲ್ಲಿ ನಡೆದಿದೆ.
ಡಿಕ್ಕಿ ಹೊಡೆದ ಪರಿಣಾಮ ತಾಯಿ ಗರ್ಭದಲ್ಲಿದ್ದ ಮಗು ಸೇರಿ ಮೂವರು ಮೃತಪಟ್ಟಿದ್ದಾರೆ.
ಪ್ರಣವ್ ಹೋಟೆಲ್ನ ಸೆಕ್ಯೂರಿಟಿ ಗಾರ್ಡ್ ನಾರಾಯಣಸ್ಚಾಮಿ(55), ಬೈಕ್ ಸವಾರ ಪಿ.ಚೊಕ್ಕನಹಳ್ಳಿ ನಿವಾಸಿ ಜನಾರ್ದನ (30) ಮೃತರು.
ಕ್ಯಾಂಟರ್ ಚಾಲಕ ಕಾರಿಗೆ ಡಿಕ್ಕಿ ಹೊಡೆದನ್ನು ತಪ್ಪಿಸಲು ಹೋಗಿ ಬೈಕ್ ಸವಾರಿನಿಗೆ ಡಿಕ್ಕಿ ಹೊಡೆದಿದ್ದು, ಆ ಬಳಿಕ ಕ್ಷಣಾದಲ್ಲಿ ರಸ್ತೆ ಪಕ್ಕದ ಹೋಟೆಲ್ ಬಳಿ ನಿಂತಿದ್ದ ಜನರ ಮೇಲೆ ನುಗ್ಗಿದೆ.
ಕಾರಿನಲ್ಲಿ ಬಂದ ಮಾನಸ ಕುಟುಂಬವೂ ಹೋಟೆಲ್ ಬಳಿ ಕಾರು ನಿಲ್ಲಿಸಿತ್ತು. ಇನ್ನೇನು ಹೋಟೆಲ್ ಒಳಗೆ ಹೋಗಬೇಕು ಅನ್ನುವಷ್ಟರಲ್ಲಿ ಜವರಾಯನಂತೆ ಟ್ಯಾಂಕರ್ ಹೋಟೆಲ್ನತ್ತ ನುಗ್ಗಿ, ಕಾರು ಮತ್ತು ಬೈಕ್ಗಳಿಗೆ ಡಿಕ್ಕಿ ಹೊಡೆದಿದೆ. 5 ಕಾರುಗಳು ಜಖಂ ಆಗಿವೆ.
ಸ್ಥಳದಲ್ಲೇ ಬೈಕ್ ಸವಾರ ಮತ್ತು ಹೋಟೆಲ್ ಸೆಕ್ಯೂರಿಟಿಗಾರ್ಡ್ ಮೃತಪಟ್ಟಿದ್ದಾರೆ. ಬೆಂಗಳೂರಿನ ಕಾಡುಗುಡಿಯ ಗರ್ಭಿಣಿ ಮಾನಸ ಮತ್ತು ಇವರ ಮಾವ ನರಸಿಂಹಗೂ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾನಸ ಗರ್ಭದಲ್ಲಿದ್ದ ಮಗು ಮೃತಪಟ್ಟಿದೆ. ಘಟನೆಯಲ್ಲಿ ಗರ್ಭಿಣಿ ಮಹಿಳೆಯ ಮೊದಲ ಮಗು ಹಾಗೂ ಮಾವ ಪ್ರಾಣಾಪಾಯದಿಂದ ಪರಾಗಿದ್ದಾರೆ.
ಕ್ಯಾಂಟರ್ ಅನ್ನು ವಶಕ್ಕೆ ಪಡೆದು ಚಾಲಕ ಅಜೀತ್ನನ್ನು ಬಂಧಿಸಿದ್ದಾರೆ. ಘಟನೆ ಸಂಬಂಧ ಪೇರೇಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.