ಕೆಲವೇ ದಿನದಲ್ಲಿ ಹೈಕಮಾಂಡ್ ಅನುಮತಿ ಪಡೆದು ಸಂಪುಟ ವಿಸ್ತರಣೆ ಮಾಡುತ್ತೇವೆ | JANATA NEWS
ಬೆಂಗಳೂರು : ಸಂಪುಟ ವಿಸ್ತರಣೆ ಮಾಡೋಣ ಎಂದು ಹೈಕಮಾಂಡ್ ಹೇಳಿದೆ. ಹಾಗಾಗಿ ಕೆಲವೇ ದಿನದಲ್ಲಿ ಸಂಪುಟ ವಿಸ್ತರಣೆ ಆಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ವಿಧಾನ ಮಂಡಲ ಅಧಿವೇಶನ ಮುಗಿದಿದೆ. ವರಿಷ್ಠರ ಜತೆಗೆ ಚರ್ಚಿಸಿ ಸಚಿವ ಸಂಪುಟ ವಿಸ್ತರಿಸುವ ಮೂಲಕ ಖಾಲಿಯಿರುವ ಆರು ಸ್ಥಾನಗಳನ್ನು ತುಂಬಲಾಗುವುದು, ವರಿಷ್ಠರ ಸೂಚನೆಯಂತೆ ಸಂಪುಟಕ್ಕೆ ಸೇರಿಸಿಕೊಳ್ಳುವವರ ಪಟ್ಟಿ ಕಳುಹಿಸುವೆ ಅಥವಾ ದೆಹಲಿಗೆ ತೆರಳಿ ಖುದ್ದು ಮಾತುಕತೆ ನಡೆಸಿ ಒಪ್ಪಿಗೆ ಪಡೆಯುವೆ ಎಂದರು.
ಕಮಿಷನ್ ಬಗ್ಗೆ ಸರ್ಕಾರವೇ ತನಿಖೆ ನಡೆಸುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ, ಯಾವುದರ ಮೇಲೆ ತನಿಖೆ ಮಾಡಬೇಕು. ಯಾವ ಆಧಾರದಲ್ಲಿ ತನಿಖೆ ಮಾಡಬೇಕು? ಎಂದು ದೂರು ನೀಡಿದರೆ ತನಿಖೆ ಮಾಡುತ್ತೇವೆ ಎಂದರು.ಗುತ್ತಿಗೆದಾರರ ಸಂಘದವರು ಯಾವುದೇ ದಾಖಲೆ ನೀಡಿಲ್ಲ.
ಲೋಕಾಯುಕ್ತಕ್ಕೆ ದೂರು ನೀಡಲಿ. ಅವರು ದೂರು ನೀಡಿದರೆ, ನಾಳೆಯೇ ತನಿಖೆಗೆ ಆದೇಶ ನೀಡುತ್ತೇವೆ. ಪ್ರತಿಪಕ್ಷದಲ್ಲೇ ಹೊಂದಾಣಿಕೆ ಇಲ್ಲದಂತಾಗಿದೆ. ಗುತ್ತಿಗೆದಾರರ ವಿಚಾರವನ್ನು ಕೊನೆಯಲ್ಲಿ ತೆಗೆದುಕೊಂಡರು. ಯಾಕೆಂದರೆ ಅದರಲ್ಲಿ ಸತ್ಯ ಇಲ್ಲ ಅಂತ ಅವರಿಗೂ ಗೊತ್ತು. ಸರ್ಕಾರ ಈಗಲೂ ಸ್ಪಷ್ಟವಾಗಿದೆ ದೂರು ನೀಡಿದ್ರೆ ತನಿಖೆ ಮಾಡಲು ಸಿದ್ಧವಿದೆ ಎಂದು ಹೇಳಿದರು.