ಜಮೀನಿಗೆ ಹಾಕಿದ್ದ ವಿದ್ಯುತ್ ತಂತಿ ಬೇಲಿ ಸ್ಪರ್ಶಸಿ 2 ಕಾಡಾನೆಗಳ ಸಾವು | JANATA NEWS
ಶಿವಮೊಗ್ಗ : ಆಯನೂರು ಸಮೀಪದ ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಯ ಚನ್ನಹಳ್ಳಿಯ ಮೆಕ್ಕೆಜೋಳದ ಹೊಲದಲ್ಲಿ ಎರಡು ಕಾಡಾನೆಗಳು ಮೃತಪಟ್ಟಿವೆ.
ಅರಣ್ಯದಂಚಿನ ಭಾಗದ ರೈತರು ಜೋಳದ ಹೊಲಕ್ಕೆ ವಿದ್ಯುತ್ ತಂತಿ ಬೇಲಿ ಅಳವಡಿಸಿದ್ದಾರೆ. ಜೋಳದ ಹೊಲಕ್ಕೆ ಬಂದ ಕಾಡಾನೆಗಳಿಗೆ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೆ ಮೃತಪಟ್ಟಿವೆ. 20 ಮತ್ತು 22 ವರ್ಷದ ಗಂಡು ಆನೆಗಳು ಮೃತಪಟ್ಟಿವೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಕಾಡು ಹಂದಿ ಭೇಟೆಯಾಡಲು ವಿದ್ಯುತ್ ತಂತಿ ಹಾಕಿರುವ ಶಂಕೆ ವ್ಯಕ್ತವಾಗಿದೆ. ಜಮೀನಿನ ಮಾಲೀಕ ಚಂದ್ರ ನಾಯ್ಕ್ ಎಂಬುವರು ತಲೆಮರೆಸಿಕೊಂಡಿದ್ದಾರೆ.
English summary :2 wildebeests died after touching the electric wire fence laid on the farm