ಸಿದ್ದರಾಮಯ್ಯ ಅವರಿಗೆ ಆರ್ ಎಸ್ ಎಸ್ ಹೆಸರು ಹೇಳದೆ ಇದ್ದರೆ ರಾಜಕೀಯ ನಡೆಯುವುದಿಲ್ಲ! | JANATA NEWS
ಬೆಂಗಳೂರು : ಸಿದ್ದರಾಮಯ್ಯ ಅವರಿಗೆ ಆರ್ ಎಸ್ ಎಸ್ ಹೆಸರು ಹೇಳದೆ ಇದ್ದರೆ ರಾಜಕೀಯ ನಡೆಯುವುದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಬೆಕ್ಕಿನ ಕಣ್ಣಿನಲ್ಲಿ ಇಲಿ ಎಂಬಂತೆ, ಏನೇ ಘಟನೆ ಆದರೂ ಆರ್ಎಸ್ಎಸ್ಗೆ ಲಿಂಕ್ ಮಾಡುತ್ತಾರೆ. ಅವರಿಗೆ ಆರ್ಎಸ್ಎಸ್ ಹೆಸರು ಹೇಳದೆ ಇದ್ದರೆ ರಾಜಕೀಯ ನಡೆಯುವುದಿಲ್ಲ.
ಆರ್ಎಸ್ಎಸ್ ಬ್ಯಾನ್ ಮಾಡಲು ಕಾರಣಗಳು ಏನಿವೆ?. ಅವರು ದೇಶಭಕ್ತಿ ಕೆಲಸ ಮಾಡುವುದಕ್ಕೆ ಅವರನ್ನು ಬ್ಯಾನ್ ಮಾಡಬೇಕಾ?. ಸಂಕಷ್ಟದಲ್ಲಿರುವ ಜನರಿಗೆ ನೆರವು ನೀಡುತ್ತಿದ್ದಾರೆ. ದೇಶದ ಸಂಸ್ಕೃತಿ ಹಾಗೂ ಪರಂಪರೆ ಉಳಿಸಲು ಹೋರಾಟ ಮಾಡುತ್ತಿದ್ದಾರೆ. ರಾಜಕೀಯವಾಗಿ ಈ ರೀತಿ ಹೇಳಿಕೆ ಕೊಡುವುದು ಸರಿಯಲ್ಲ ಎಂದು ತಿಳಿಸಿದರು.
ಆರ್ ಎಸ್ ಎಸ್ ದೇಶದ ಅತ್ಯಂತ ಪ್ರಮುಖವಾದ ದೇಶ ಭಕ್ತಿಯ ಸಂಸ್ಥೆಯಾಗಿದೆ. ಆರ್ ಎಸ್ ಎಸ್ ದೇಶಾಭಿಮಾನ ಮೂಡಿಸುವ ಕೆಲಸ ಮಾಡುತ್ತಿದೆ. ಅದನ್ನು ಬ್ಯಾನ್ ಮಾಡಲು ಹೇಳುವುದು ಅರ್ಥ ಹೀನ ಎಂದರು.
ಪಿ ಎಫ್ ಐ ಹಲವು ವರ್ಷದಿಂದ ಈ ತರ ದೇಶ ದ್ರೋಹ ಚಟುವಟಿಕೆ ಮಾಡುತ್ತಿದ್ದರು. ಹಲವಾರು ರೂಪಾಂತರದ ಮೂಲಕ ಕಾರ್ಯಾಚರಣೆ ನಡೆಸುತ್ತಿದ್ದರು. ಹಿಂದೆ ಸಿಮಿ ಇತ್ತು. ನಂತರ ಅದು ಕೆಎಫ್ ಡಿಯಾಗಿ ನಂತರ ಅದು ಪಿಎಫ್ ಐ ಆಗಿ ಬಂದಿದೆ. ಮುಖ್ಯವಾಹಿನಿಯಿಂದ ಬಹಳ ದೂರ ಹೋಗಿದ್ದಾರೆ. ವಿದೇಶದಿಂದ ಆದೇಶ ಪಡೆದು ಕಾರ್ಯಾಚರಣೆ ನಡೆಸುತ್ತಿದ್ದರು. ಇತ್ತೀಚಿಗಿನ ಅವರ ಚಟುವಟಿಕೆ ಬಹಳ ದಮನಕಾರಿ ಆಗಿತ್ತು. ದೇಶದ ಕಾನೂನು ಸುವ್ಯವಸ್ಥೆ ಕದಡುವ ಕೆಲಸ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಬ್ಯಾನ್ ಗೆ ಆಗ್ರಹಿಸಿದ್ದವು ಎಂದರು.