Sun,Jun21,2026
ಕನ್ನಡ / English

ಮರ್ಯಾದಾ ಹತ್ಯೆ: ಪ್ರೇಮಿಗಳನ್ನ ಒಂದು ಮಾಡ್ತೀವಿ ಎಂದು ಕರೆದು ಹತ್ಯೆ | JANATA NEWS

18 Oct 2022

ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯಲ್ಲಿ ಭೀಕರ ಮರ್ಯಾದಾ ಹತ್ಯೆ ಬೆಳಕಿಗೆ ಬಂದಿದೆ. ಯುವತಿಯ ತಂದೆ ಹಾಗೂ ಮಾವಂದಿರು ಪ್ರೇಮಿಗಳಿಬ್ಬರನ್ನು ಕೊಲೆಗೈದು ಕೃಷ್ಣಾ ನದಿಗೆ ಎಸೆದಿದ್ದಾರೆ ಎನ್ನಲಾಗಿದೆ.

ಕಳೆದ ಕೆಲ ದಿನಗಳ ಹಿಂದೆ ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ಇಬ್ಬರ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಗ್ರಾಮದ ವಿಶ್ವನಾಥ್ ನೆಲಗಿ(24) ಹಾಗೂ ರಾಜೇಶ್ವರಿ(18) ಹತ್ಯೆಯಾದ ಪ್ರೇಮಿಗಳು. ಸುಮಾರು 4-5 ವರ್ಷಗಳಿಂದ ವಿಶ್ವನಾಥ್ ಹಾಗೂ ರಾಜೇಶ್ವರಿ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು.

ಈ ವಿಚಾರ ತಿಳಿದ ರಾಜೇಶ್ವರಿ ಪೋಷಕರು, ಅಪ್ರಾಪ್ತ ಮಗಳ ಪ್ರೀತಿಗೆ ಅಡ್ಡಿಪಡಿಸಿ ಬುದ್ಧಿ ಮಾತು ಹೇಳಿದ್ದರು. ವಿಶ್ವನಾಥ್‌ನ ಮನೆಯವರು ಆತನನ್ನು ಕೂಲಿ ಕೆಲಸಕ್ಕೆಂದು ಕೇರಳದ ಕಾಸರಗೋಡಿಗೆ ಕಳುಹಿಸಿದ್ದರು.

ಆದರೆ ರಾಜೇಶ್ವರಿಯ ತಂದೆ ಪರಸಪ್ಪ ಕರಡಿ ಇಬ್ಬರನ್ನೂ ಒಂದು ಮಾಡಿಸುವುದಾಗಿ ನಂಬಿಸಿ, ವಿಶ್ವನಾಥ್‌ನನ್ನು ಊರಿಗೆ ಬರುವಂತೆ ಹೇಳಿದ್ದಾರೆ. ನರಗುಂದ ಬಳಿ ಇದ್ದ ವಿಶ್ವನಾಥನನ್ನು ನಂಬಿಸಿ ರಾಜೇಶ್ವರಿ, ನಿನ್ನನ್ನು ಒಂದು ಮಾಡೋದಾಗಿ ಬೇವಿನಮಟ್ಟಿ ಗ್ರಾಮದಿಂದ ಕರೆದೊಯ್ದಿದ್ದರಂತೆ. ಇತ್ತ ಬಾಲಕಿಯನ್ನು ಕರೆತಂದಿದ್ದ ಆರೋಪಿಗಳು ರಾಜೇಶ್ವರಿ ಕತ್ತನ್ನು ವೇಲ್ ನಿಂದ ಬಿಗಿದು ಕೊಲೆ ಮಾಡಿದ್ದರಂತೆ. ಇತ್ತ ವಿಶ್ವನಾಥನ ಮರ್ಮಾಂಗ ಹಾಗೂ ಎದೆಗೆ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದರಂತೆ.

ಅಲ್ಲಿಂದ ಇಬ್ಬರ ಮೃತ ದೇಹಗಳನ್ನು ಕ್ರೂಸರ್ ವಾಹನದಲ್ಲಿ ಕೊಂಡೊಯ್ದಿದ್ದಾರೆ. ಶವಗಳನ್ನು ಹುನಗುಂದ ಎನ್‌ಹೆಚ್ 50ಯ ಕೃಷ್ಣಾ ನದಿ ಬ್ರಿಡ್ಜ್ ಮೇಲೆ ಕೊಂಡೊಯ್ದು, ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಶವಗಳ ಮೇಲಿನ ಬಟ್ಟೆ ಬಿಚ್ಚಿ, ಹರಿಯುತ್ತಿದ್ದ ಕೃಷ್ಣಾ ನದಿಗೆ ಎಸೆದಿದ್ದಾರೆ. ನಂತರ ಅವರಿಬ್ಬರ ಬಟ್ಟೆಗಳನ್ನು ಸಂಗಮ ಕ್ರಾಸ್ ಬಳಿ ತಂದು ಸುಟ್ಟು ಹಾಕಿದ್ದಾರೆ.

ವಿಚಾರಣೆಗೆ ಸಂದರ್ಭದಲ್ಲಿ ಅನುಮಾನಗೊಂಡ ಪೊಲೀಸರು, ಶಂಕೆಯ ಮೇರೆಗೆ ಅಕ್ಟೋಬರ್ 15 ರಂದು ಯುವತಿಯ ಸಹೋದರ ರವಿ ಹುಲ್ಲಣ್ಣವರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಆರೋಪಿ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.

ಯುವತಿ ತಂದೆ ಪರಸಪ್ಪ ಕರಡಿ ಕುಮ್ಮಕ್ಕಿನಿಂದಲೇ ಕೊಲೆ ಮಾಡಿದ್ದಾಗಿ ಹೇಳಿದ್ದಾನೆ ಎನ್ನಲಾಗಿದೆ. ಪ್ರಕರಣದ ಸಂಬಂಧ ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರು, ರಾಜೇಶ್ವರಿ ಕರಡಿ (17) ವಿಶ್ವನಾಥ ನೆಲಗಿ (22) ಕೊಲೆಯಾದ ಪ್ರೇಮಿಗಳು. ಪ್ರಕರಣದಲ್ಲಿ ರಾಜೇಶ್ವರಿ ಅಣ್ಣ ರವಿ ಹುಲ್ಲಣ್ಣವರ (19), ಮಾವಂದಿರರಾದ ಹನುಮಂತ ಮಲ್ನಾಡದ (22), ಬೀರಪ್ಪ ದಳವಾಯಿ (18) ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

RELATED TOPICS:
English summary :Honor killing: Killing of lovers by calling them

ನಾನು ಮತ್ತು ಇಟಲಿ ಎಂದಿಗೂ ಬೇಡುವುದಿಲ್ಲ  - ಟ್ರಂಪ್ ಹೇಳಿಕೆಗೆ ಮೆಲೋನಿ ತಿರುಗೇಟು
ನಾನು ಮತ್ತು ಇಟಲಿ ಎಂದಿಗೂ ಬೇಡುವುದಿಲ್ಲ - ಟ್ರಂಪ್ ಹೇಳಿಕೆಗೆ ಮೆಲೋನಿ ತಿರುಗೇಟು
ಎನ್‌ಡಿಎ ಶಾಸಕರ ಅಡ್ಡ ಮತದಾನ ಆರೋಪ : ಕರ್ನಾಟಕದ ನಾಯಕರಿಗೆ ಬಿಜೆಪಿ ಹೈಕಮಾಂಡ್ ಸಮನ್ಸ್
ಎನ್‌ಡಿಎ ಶಾಸಕರ ಅಡ್ಡ ಮತದಾನ ಆರೋಪ : ಕರ್ನಾಟಕದ ನಾಯಕರಿಗೆ ಬಿಜೆಪಿ ಹೈಕಮಾಂಡ್ ಸಮನ್ಸ್
ಅವರು ತಿರುಮಲ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಸಿಎಂ ಡಿ.ಕೆ. ಶಿವಕುಮಾರ್
ಅವರು ತಿರುಮಲ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಸಿಎಂ ಡಿ.ಕೆ. ಶಿವಕುಮಾರ್
ಮೋದಿ ನಾಯಕರಾಗಿದ್ದಾಗ ಭಾರತದ ಮೇಲೆ ದಾಳಿ ನಡೆದರೆ ಅಮೆರಿಕ ಭಾರತವನ್ನು ರಕ್ಷಿಸುತ್ತದೆ - ಅಧ್ಯಕ್ಷ ಟ್ರಂಪ್
ಮೋದಿ ನಾಯಕರಾಗಿದ್ದಾಗ ಭಾರತದ ಮೇಲೆ ದಾಳಿ ನಡೆದರೆ ಅಮೆರಿಕ ಭಾರತವನ್ನು ರಕ್ಷಿಸುತ್ತದೆ - ಅಧ್ಯಕ್ಷ ಟ್ರಂಪ್
ಭಾರತದ 3 ನಾವಿಕರ ಸಾವಿನ ವಿಷಯ ಟ್ರಂಪ್ ಎದುರು ಪ್ರಸ್ತಾವ ಮಾಡಿದ ಪ್ರಧಾನಿ ಮೋದಿ
ಭಾರತದ 3 ನಾವಿಕರ ಸಾವಿನ ವಿಷಯ ಟ್ರಂಪ್ ಎದುರು ಪ್ರಸ್ತಾವ ಮಾಡಿದ ಪ್ರಧಾನಿ ಮೋದಿ
 ಜಿ7 ಶೃಂಗಸಭೆಯಲ್ಲಿ ಗಮನ ಸೆಳೆಯುತ್ತದ ಪ್ರಧಾನಿ ಮೋದಿ ಅವರ ವಿಶ್ವಾಸಾರ್ಹತೆಯ ಕೊರತೆ ಹೇಳಿಕೆ
ಜಿ7 ಶೃಂಗಸಭೆಯಲ್ಲಿ ಗಮನ ಸೆಳೆಯುತ್ತದ ಪ್ರಧಾನಿ ಮೋದಿ ಅವರ ವಿಶ್ವಾಸಾರ್ಹತೆಯ ಕೊರತೆ ಹೇಳಿಕೆ
ಅಮೆರಿಕ ಅಧ್ಯಕ್ಷ ಟ್ರಂಪ್ ಗೆ ಫ್ರಾನ್ಸ್‌ ನಲ್ಲಿ ಕೆಂಪು ಹಾಸಿಗೆ ಸ್ವಾಗತದ ಅನುಪಸ್ಥಿತಿ : ಟ್ರಂಪ್ ಅಸಮಾಧಾನ
ಅಮೆರಿಕ ಅಧ್ಯಕ್ಷ ಟ್ರಂಪ್ ಗೆ ಫ್ರಾನ್ಸ್‌ ನಲ್ಲಿ ಕೆಂಪು ಹಾಸಿಗೆ ಸ್ವಾಗತದ ಅನುಪಸ್ಥಿತಿ : ಟ್ರಂಪ್ ಅಸಮಾಧಾನ
ಎರಡೂ ಕಡೆಯ ವಾದ ಆಲಿಸಿ ಟಿಎಂಸಿಯ ಬಂಡಾಯ ಸಂಸದರ ವಿಷಯದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ನಿರ್ಧಾರ
ಎರಡೂ ಕಡೆಯ ವಾದ ಆಲಿಸಿ ಟಿಎಂಸಿಯ ಬಂಡಾಯ ಸಂಸದರ ವಿಷಯದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ನಿರ್ಧಾರ
ಅಮೆರಿಕದ ಒಪ್ಪಂದವನ್ನು ತಿರಸ್ಕರಿಸಿದ ಇಸ್ರೇಲಿ ಸಚಿವರು, ಇರಾನ್ ದಾಳಿಗೆ ಬಲವಾದ ಪ್ರತಿಕ್ರಿಯೆ ನೀಡುವ ಪ್ರತಿಜ್ಞೆ
ಅಮೆರಿಕದ ಒಪ್ಪಂದವನ್ನು ತಿರಸ್ಕರಿಸಿದ ಇಸ್ರೇಲಿ ಸಚಿವರು, ಇರಾನ್ ದಾಳಿಗೆ ಬಲವಾದ ಪ್ರತಿಕ್ರಿಯೆ ನೀಡುವ ಪ್ರತಿಜ್ಞೆ
ಇರಾನ್ ಒಪ್ಪಂದವನ್ನು ಘೋಷಿಸಿದ ಟ್ರಂಪ್, ಹಾರ್ಮುಜ್ ಜಲಸಂಧಿಯನ್ನು ಪುನಃ ತೆರೆಯಲು ಆದೇಶ
ಇರಾನ್ ಒಪ್ಪಂದವನ್ನು ಘೋಷಿಸಿದ ಟ್ರಂಪ್, ಹಾರ್ಮುಜ್ ಜಲಸಂಧಿಯನ್ನು ಪುನಃ ತೆರೆಯಲು ಆದೇಶ
ಎನ್‌ಡಿಎಗೆ ಟಿಎಂಸಿಯ ಬಂಡಾಯ ಸಂಸದರ ಬೆಂಬಲ : ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಗೆ ಭೇಟಿ
ಎನ್‌ಡಿಎಗೆ ಟಿಎಂಸಿಯ ಬಂಡಾಯ ಸಂಸದರ ಬೆಂಬಲ : ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಗೆ ಭೇಟಿ
 ಫ್ರಾನ್ಸ್ ಜೊತೆ ನಡೆಯುತ್ತಿರುವ ರಫೇಲ್ ಚರ್ಚೆಯಲ್ಲಿ ಮೇಕ್ ಇನ್ ಇಂಡಿಯಾ ಗೆ ಒತ್ತು ನೀಡಿದ  ಭಾರತ
ಫ್ರಾನ್ಸ್ ಜೊತೆ ನಡೆಯುತ್ತಿರುವ ರಫೇಲ್ ಚರ್ಚೆಯಲ್ಲಿ ಮೇಕ್ ಇನ್ ಇಂಡಿಯಾ ಗೆ ಒತ್ತು ನೀಡಿದ ಭಾರತ

ನ್ಯೂಸ್ MORE NEWS...