ದೇವಿ ಮೂರ್ತಿ ಪ್ರತಿಷ್ಠಾಪನೆ ವೇಳೆ ಸಿಡಿಮದ್ದು ಸ್ಫೋಟ 15 ಜನರಿಗೆ ಗಾಯ | JANATA NEWS
ಕಲಬುರಗಿ : ಮರಗಮ್ಮ ದೇವಿ ಮೂರ್ತಿ ಪ್ರತಿಷ್ಠಾಪನೆ ವೇಳೆ ಸಿಡಿ ಮದ್ದು ಸ್ಫೋಟಗೊಂಡು ಭಕ್ತರು ಗಾಯಗೊಂಡಿರುವ ಘಟನೆ ಕಲಬುರಗಿ ತಾಲೂಕಿನ ಹೊನ್ನಕಿರಣಗಿ ಗ್ರಾಮದಲ್ಲಿ ನಡೆದಿದೆ.
ಹೊನ್ನಕಿರಣಗಿ ಗ್ರಾಮದಲ್ಲಿ ಇಂದು (ಅ. 21) ಮರಗಮ್ಮದೇವಿ ಮೂರ್ತಿ ಪ್ರತಿಷ್ಠಾಪನೆ ಮಹೋತ್ಸವ ಇತ್ತು. ಈ ಹಿನ್ನೆಲೆ ಗ್ರಾಮಸ್ಥರು ಮದ್ದು ಹಾರಿಸುವವರನ್ನು ಕರೆಸಿದ್ದರು.
ಮದ್ದು ಹಾರಿಸುತ್ತಿರುವ ವೇಳೆ ಮೇಲೆ ಹಾರಿಸಿದ್ದ ಮದ್ದು, ಕೆಳಗೆ ಬಿದ್ದಿದೆ. ಪರಿಣಾಮ ಅಲ್ಲೆ ಇದ್ದ ಬೇರೆ ಸಿಡಿಮದ್ದುಗಳಿಗು ಬೆಂಕಿ ತಗುಲಿ ಸ್ಪೋಟಗೊಂಡಿವೆ.
15 ಜನರಿಗೆ ಗಾಯವಾಗಿದ್ದು, 8ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಟ್ಟು ಐದು ಕೆಜಿಯಷ್ಟು ಮದ್ದು ಬ್ಲಾಸ್ಟ್ ಆಗಿದ್ದು, ಘಟನಾ ಸ್ಥಳಕ್ಕೆ ಫರಹತಾಬಾದ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.