Sun,Mar22,2026
ಕನ್ನಡ / English

ಚಿತ್ರದುರ್ಗ ವೈದ್ಯೆ ರೂಪಾ ಸಾವು ಕೇಸ್: ಪೋಸ್ಟ್ ಮಾರ್ಟಂನಲ್ಲಿ ಸಾವಿನ ರಹಸ್ಯ ಬಯಲು! | JANATA NEWS

07 Dec 2022

ಚಿತ್ರದುರ್ಗ : ಚಿತ್ರದುರ್ಗದ ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ರೂಪಾ ಮೃತಪಟ್ಟಿದ್ದು ಆತ್ಮಹತ್ಯೆಯೋ, ಹತ್ಯೆಯೋ ಎನ್ನುವ ಪ್ರಶ್ನೆಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಚಿತ್ರದುರ್ಗ ನಗರದ ವಿ.ಪಿ.ಬಡಾವಣೆಯ ಮನೆಯಲ್ಲಿ ಡಾ.ರೂಪಾ ಅವರು ಸೋಮವಾರ ಅನುಮಾಸ್ಪದವಾಗಿ ಸಾವನ್ನಪ್ಪಿದ್ದರು. ತಾಯಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಬೆಳಿಗ್ಗೆ 8 ಗಂಟೆಯ ವೇಳೆಗೆ ಪುತ್ರ ಗಮನಿಸಿ ಎರಡನೇ ಮಹಡಿಯಲ್ಲಿದ್ದ ತಂದೆ ಡಾ.ರವಿಗೆ ಮಾಹಿತಿ ನೀಡಿದ್ದಾನೆ. ವಿಷಯ ತಿಳಿದ ರವಿ ಕೂಡಲೇ ಧಾವಿಸಿ ಪತ್ನಿಯ ದೇಹವನ್ನು ಪರಿಶೀಲಿಸಿದ್ದಾರೆ, ತಲೆಯಲ್ಲಿ ತೀವ್ರ ರಕ್ತಸ್ರಾವ ಆಗಿದ್ದರಿಂದ ಕೂಡಲೇ. ತುರುವನೂರು ರಸ್ತೆಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಮೃತದೇಹ ಸಾಗಿಸಿದ್ದಾರೆ. ಮನೆಯಲ್ಲಿ ಕಾಲುಜಾರಿ ಬಿದ್ದು ತಲೆಗೆ ಪೆಟ್ಟುಬಿದ್ದು ಮೃತಪಟ್ಟಿದ್ದಾಗಿ ರವಿ ಅವರು ಮಾಹಿತಿ ನೀಡಿದ್ದರು.

ರೂಪಾ ಅವರು ಸೋಮವಾರ ಬೆಳಿಗ್ಗೆ 6ಕ್ಕೆ ಹಾಸಿಗೆಯಿಂದ ಎದ್ದಿದ್ದರು. ಏರೊಬಿಕ್‌ಗೆ ತೆರಳಬೇಕಿದ್ದ ಅವರು ತರಬೇತುದಾರರು ರಜೆ ಹಾಕಿದ್ದರಿಂದ ಮನೆಯಲ್ಲಿಯೇ ಉಳಿಯಬೇಕಾಯಿತು. ಲೆಮನ್‌ ಟೀ ಸೇವಿಸಿದ ಬಳಿಕ ಪತಿ ಮನೆಯ ಎರಡನೇ ಮಹಡಿಯಲ್ಲಿದ್ದ ಜಿಮ್‌ಗೆ ತೆರಳಿದ್ದರು. 16 ವರ್ಷದ ಪುತ್ರ ಹಾಗೂ ಅತ್ತೆ ಮನೆಯಲ್ಲಿಯೇ ಇದ್ದರು.

ತಲೆಯ ಬಲಭಾಗದಿಂದ ಹಾರಿದ ಗುಂಡು ಎಡಭಾಗದಿಂದ ಹೊರಗೆ ಬಂದಿದೆ. ರೂಪಾ ಅವರ ತಲೆಯಿಂದ ಹೊರಗೆ ಬಂದ ಗುಂಡು ಗೋಡೆಗೆ ತಗುಲಿ ಟೇಬಲ್‌ ಮೇಲೆ ಬಿದ್ದಿದೆ. ಗುಂಡು ಹಾಗೂ ರಿವಾಲ್ವಾರ್‌ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದು ಇಂಗ್ಲೆಂಡ್‌ನ ರಿವಾಲ್ವಾರ್‌ ಆಗಿದ್ದು, ಡಾ.ರವಿ ಪರವಾನಗಿ ಹೊಂದಿದ್ದರು..

ಪೋಸ್ಟ್ ಮಾರ್ಟಂ ಮಾಡಿದಮೇಲೆ ರೂಪಾಳ ಸಾವಿನ ಪ್ರಕರಣದಲ್ಲಿ ಅಸಲಿ ಸತ್ಯ ಬಯಲಿಗೆ ಬಂದಿದೆ. ಅದೇನಂದ್ರೆ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಬಯಲಿಗೆ ಬಂದಿದೆ

ಇನ್ನು ವೈದ್ಯೆ ರೂಪಾ ಸಾವನ್ನಪ್ಪಿದ್ದ ರೂಮಿನಲ್ಲಿ ಅವರು ಬರೆದಿದ್ದಾರೆ ಎನ್ನಲಾದ ಡೆತ್ ನೋಟ್ ಸಿಕ್ಕಿದೆಯಂತೆ. ಆ ಪತ್ರದಲ್ಲಿ ಈ ಸಾವಿಗೆ ನಾನೇ ಕಾರಣ. ಹೃದಯಾಘಾತವಾಗಿ ಮೃತಪಟ್ಟಿದ್ದಾಗಿ ಹೇಳಿ, ಪೋಲೀಸರಿಗೆ ಈ ಕುರಿತು ಮಾಹಿತಿ ನೀಡಬೇಡಿ, ಎಂದು ಬರೆಯಲಾಗಿದೆಯಂತೆ. ತನ್ನ ಪತಿ ಡಾ.ರವಿಗೆ ಅಡ್ರೆಸ್ ಮಾಡಿ ಪತ್ರ ಬರೆದಿದ್ದ ರೂಪಾ, ನೀನು ನನಗೆ ಮೋಸ ಮಾಡಿದೆ, ನನ್ನಿಂದಲೂ ಕೆಲವು ತಪ್ಪುಗಳಾಗಿವೆ ಎಂದು ಉಲ್ಲೇಖಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಚಿತ್ರದುರ್ಗ ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ರೂಪಾ ಪತ್ರ ಬರೆದಿದ್ದು ಕನ್ನಡದಲ್ಲಿ ಎನ್ನುವುದು ಅನುಮಾನಕ್ಕೆ ಕಾರಣವಾಗಿದೆ. ಸ್ವತಃ ವೈದ್ಯೆಯಾಗಿರುವ ರೂಪಾ ಕನ್ನಡ ಅಕ್ಷರಗಳಲ್ಲಿ ಲೆಟರ್ ಬರೆದು ಇಂಗ್ಲೀಷ್ನಲ್ಲಿ ಸಹಿ ಮಾಡಿದ್ದಾರೆ ಎಂಬ ಸಹಜ ಅನುಮಾನ ವ್ಯಕ್ತವಾಗಿದೆ.

ಇದರ ಮಧ್ಯೆ,ಡಾ. ರೂಪಾ ಖಿನ್ನತೆಗೆ ಒಳಗಾಗಿದ್ದಳು ಅನ್ನೋದ ಬೆಳಕಿಗೆ ಬಂದಿದೆ. ಹೌದು.. 25 ಎಕರೆ ಜಮೀನಿನಲ್ಲಿ ದಾಳಿಂಬೆ ಬೆಳೆದು ಕೋಟ್ಯಂತರ ರೂಪಾಯಿ ಸಾಲ‌ ಮಾಡಿ ಕೈ ಸುಟ್ಟುಕೊಂಡಿದ್ದರು. ಅದರ ಬಗ್ಗೆ ಹಲವು ಇಬ್ಬರ ನಡುವೆ ಚರ್ಚೆಯಾಗಿತ್ತು.. ಜೊತೆಗೆ ಹೋಟೆಲ್ ಖರೀದಿಸಿ ಅದ್ರಲ್ಲೂ ನಷ್ಟ ಅನುಭವಿಸಿದ್ದರು. ಇತ್ತೀಚೆಗೆ ಪೋಷಕರ ಸಾವಿನಿಂದ ವೈದ್ಯೆ ರೂಪಾ ಕುಗ್ಗಿಹೋಗಿದ್ದರು ಅಂತ ಹೇಳಲಾಗ್ತಿದೆ. ಇದೇ ಕಾರಣಕ್ಕೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಎಂಬಂತೆ ಗೋಚರವಾಗುತ್ತಿದ್ದು. ರೂಪಾ ಸಹೋದರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದಾರೆ. ತನಿಖೆಯ ಬಳಿಕ ನಿಜಾಂಶ ಹೊರಬರಲಿದೆ..

RELATED TOPICS:
English summary :Chitradurga doctor Rupa death case: The secret of death is revealed in the post mortem!

ಹಾರ್ಮುಜ್ ಜಲಸಂಧಿ : ಎಲ್ಲಾ ಭಾರತೀಯ ಹಡಗುಗಳು ಸುರಕ್ಷಿತವಾಗಿವೆ ಮತ್ತು 611 ಹಡಗುಗಳು ಸುರಕ್ಷಿತವಾಗಿವೆ - ಸಚಿವಾಲಯ
ಹಾರ್ಮುಜ್ ಜಲಸಂಧಿ : ಎಲ್ಲಾ ಭಾರತೀಯ ಹಡಗುಗಳು ಸುರಕ್ಷಿತವಾಗಿವೆ ಮತ್ತು 611 ಹಡಗುಗಳು ಸುರಕ್ಷಿತವಾಗಿವೆ - ಸಚಿವಾಲಯ
ಕತಾರ್ ಎಲ್‌ಎನ್‌ಜಿ ದಾಳಿ: ಇರಾನ್‌ಗೆ ಟ್ರಂಪ್ ಎಚ್ಚರಿಕೆ, ಭಾರಿ ಪ್ರತೀಕಾರದ ಬೆದರಿಕೆ
ಕತಾರ್ ಎಲ್‌ಎನ್‌ಜಿ ದಾಳಿ: ಇರಾನ್‌ಗೆ ಟ್ರಂಪ್ ಎಚ್ಚರಿಕೆ, ಭಾರಿ ಪ್ರತೀಕಾರದ ಬೆದರಿಕೆ
ಗುಪ್ತಚರ ಮೌಲ್ಯಮಾಪನದಲ್ಲಿ ಪಾಕಿಸ್ತಾನ ಸಂಭಾವ್ಯ ಪರಮಾಣು ಬೆದರಿಕೆ ಎಂದ ಅಮೆರಿಕ
ಗುಪ್ತಚರ ಮೌಲ್ಯಮಾಪನದಲ್ಲಿ ಪಾಕಿಸ್ತಾನ ಸಂಭಾವ್ಯ ಪರಮಾಣು ಬೆದರಿಕೆ ಎಂದ ಅಮೆರಿಕ
ಕೋಗಿಲುವಿನಲ್ಲಿ ಬಾಂಗ್ಲಾದೇಶಿಗಳಿಗೆ ಭೂಮಿ ಮಂಜೂರು ಮಾಡಲಾಗಿದೆ - ಆರ್ ಅಶೋಕ ಆರೋಪ, ಪ್ರತಿಭಟನೆಗಳ ಎಚ್ಚರಿಕೆ
ಕೋಗಿಲುವಿನಲ್ಲಿ ಬಾಂಗ್ಲಾದೇಶಿಗಳಿಗೆ ಭೂಮಿ ಮಂಜೂರು ಮಾಡಲಾಗಿದೆ - ಆರ್ ಅಶೋಕ ಆರೋಪ, ಪ್ರತಿಭಟನೆಗಳ ಎಚ್ಚರಿಕೆ
ಕಾಬೂಲ್ ಆಸ್ಪತ್ರೆಯ ಮೇಲಿನ ಪಾಕಿಸ್ತಾನದ ದಾಳಿಯನ್ನು ಖಂಡಿಸಿದ ಭಾರತ
ಕಾಬೂಲ್ ಆಸ್ಪತ್ರೆಯ ಮೇಲಿನ ಪಾಕಿಸ್ತಾನದ ದಾಳಿಯನ್ನು ಖಂಡಿಸಿದ ಭಾರತ
ಸಚಿವರ ಗೈರು, ನಿರಂತರ ನಿರ್ಲಕ್ಷ್ಯದಿಂದ ಬೇಸತ್ತು ಸಭಾತ್ಯಾಗ ಮಾಡಿ ಸದನವನ್ನು ಮುಂದೂಡಿದ ಸ್ಪೀಕರ್ ಖಾದರ್
ಸಚಿವರ ಗೈರು, ನಿರಂತರ ನಿರ್ಲಕ್ಷ್ಯದಿಂದ ಬೇಸತ್ತು ಸಭಾತ್ಯಾಗ ಮಾಡಿ ಸದನವನ್ನು ಮುಂದೂಡಿದ ಸ್ಪೀಕರ್ ಖಾದರ್
ಶಿವಾಲಿಕ್ ಎಲ್‌ಪಿಜಿ ವಾಹಕ ಹಡಗು ಇರಾನ್ ದಾಟಿದ್ದು ಇಂದು ಮುಂಬೈ ತಲುಪಲಿದೆ - ಶಿಪ್ಪಿಂಗ್ ಸಚಿವಾಲಯ, ಭಾರತ ಸರ್ಕಾರ
ಶಿವಾಲಿಕ್ ಎಲ್‌ಪಿಜಿ ವಾಹಕ ಹಡಗು ಇರಾನ್ ದಾಟಿದ್ದು ಇಂದು ಮುಂಬೈ ತಲುಪಲಿದೆ - ಶಿಪ್ಪಿಂಗ್ ಸಚಿವಾಲಯ, ಭಾರತ ಸರ್ಕಾರ
ಕಾಂಗ್ರೆಸ್ ಶಾಸಕರ ಖರೀದಿ... ಖಾಲಿ ಚೆಕ್‌ಗಳೊಂದಿಗೆ ಸಿಕ್ಕಿಬಿದ್ದಿ ಇಬ್ಬರು ; ಪ್ರತಿ ಶಾಸಕರಿಗೆ 5 ಕೋಟಿ - ಡಿಕೆಶಿ
ಕಾಂಗ್ರೆಸ್ ಶಾಸಕರ ಖರೀದಿ... ಖಾಲಿ ಚೆಕ್‌ಗಳೊಂದಿಗೆ ಸಿಕ್ಕಿಬಿದ್ದಿ ಇಬ್ಬರು ; ಪ್ರತಿ ಶಾಸಕರಿಗೆ 5 ಕೋಟಿ - ಡಿಕೆಶಿ
 ಅಫ್ಘಾನಿಸ್ತಾನದ ಭೂಪ್ರದೇಶದಲ್ಲಿ ಪಾಕಿಸ್ತಾನ ನಡೆಸಿದ ವಾಯುದಾಳಿಯನ್ನು ಖಂಡಿಸಿದ ಭಾರತ
ಅಫ್ಘಾನಿಸ್ತಾನದ ಭೂಪ್ರದೇಶದಲ್ಲಿ ಪಾಕಿಸ್ತಾನ ನಡೆಸಿದ ವಾಯುದಾಳಿಯನ್ನು ಖಂಡಿಸಿದ ಭಾರತ
ಆತಂಕದ ಇಂಧನ ಸಂಗ್ರಹಣೆಯ ವಿರುದ್ಧ ಸೂಚನೆ ನೀಡಿದ ಕೇಂದ್ರ ಸರ್ಕಾರ
ಆತಂಕದ ಇಂಧನ ಸಂಗ್ರಹಣೆಯ ವಿರುದ್ಧ ಸೂಚನೆ ನೀಡಿದ ಕೇಂದ್ರ ಸರ್ಕಾರ
ಉದ್ವಿಗ್ನತೆಯ ನಡುವೆಯೂ ಹಾರ್ಮುಜ್ ಜಲಸಂಧಿಯ ಮೂಲಕ ಭಾರತ-ಬಂಧಿತ ಎರಡು ಎಲ್‌ಪಿಜಿ ಟ್ಯಾಂಕರ್‌ಗಳಿಗೆ ಅನುಮತಿ ನೀಡಿದ  ಇರಾನ್
ಉದ್ವಿಗ್ನತೆಯ ನಡುವೆಯೂ ಹಾರ್ಮುಜ್ ಜಲಸಂಧಿಯ ಮೂಲಕ ಭಾರತ-ಬಂಧಿತ ಎರಡು ಎಲ್‌ಪಿಜಿ ಟ್ಯಾಂಕರ್‌ಗಳಿಗೆ ಅನುಮತಿ ನೀಡಿದ ಇರಾನ್
ನನ್ನ ಕೊನೆಯ ಉಸಿರಿನವರೆಗೂ ನಾನು ರಾಜಕೀಯದಲ್ಲಿಯೇ ಇರುತ್ತೇನೆ - ಸಿಎಂ ಸಿದ್ದರಾಮಯ್ಯ
ನನ್ನ ಕೊನೆಯ ಉಸಿರಿನವರೆಗೂ ನಾನು ರಾಜಕೀಯದಲ್ಲಿಯೇ ಇರುತ್ತೇನೆ - ಸಿಎಂ ಸಿದ್ದರಾಮಯ್ಯ

ನ್ಯೂಸ್ MORE NEWS...